Sunday, April 13, 2025

ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ `ಗರಿಗಳ ಭಾನುವಾರ'

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ `ಗರಿಗಳ ಭಾನುವಾರ' ಆಚರಿಸಲಾಯಿತು. 
    ಭದ್ರಾವತಿ :  ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ `ಗರಿಗಳ ಭಾನುವಾರ' ಆಚರಿಸಲಾಯಿತು. 
    ಭಕ್ತಾದಿಗಳು ಗರಿಗಳನ್ನು ಹಿಡಿದು ಯೇಸುವಿಗೆ `ಹೊಸಾನ್ನ' ಎಂದು ಘೋಷಣೆ ಕೂಗುತ್ತಾ, ಜೈಕಾರ ಹಾಕುತ್ತಾ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಿದರು. 
    ಕ್ರೈಸ್ತ ಸಮುದಾಯದವರಿಗೆ ಪವಿತ್ರ ವಾರದ ಸಂಪ್ರದಾಯಿಕ ಆಚರಣೆಯ ವಿಧಿವಿಧಾನಗಳು ಇಂದಿನಿಂದ ಪ್ರಾರಂಭವಾಗಿದ್ದು, ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ಪಾದ ತೊಳೆದು ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟಿದ್ದರು. ಅದರ ಆಚರಣೆಯನ್ನು ಗುರುವಾರ ಗುರುಗಳು ಕೆಲವು ಆಯ್ದ ಭಕ್ತರ ಪಾದಗಳನ್ನು ತೊಳೆಯುವುದರ ಮೂಲಕ ಆಚರಿಸಲಾಗುವುದು. 
    ಶುಕ್ರವಾರ ಏಸುಕ್ರಿಸ್ತರ ಶಿಲುಬೆ ಯಾತನೆ ಮರಣದ ದಿನವಾಗಿದ್ದು, ಅಂದು ಕ್ರೈಸ್ತ ಭಕ್ತರು (ಗುಡ್ ಫ್ರೈಡೆ), ಉಪವಾಸ ಮತ್ತು ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಗುವುದು. 
    ಶನಿವಾರ ಮಧ್ಯರಾತ್ರಿಯ ಜಾಗರಣ ಪೂಜಾ ವಿಧಿ-ವಿಧಾನಗಳು ದೇವಾಲಯಗಳಲ್ಲಿ ನೆರವೇರಲಿದ್ದು, ಅಂದು ಯೇಸು ಕ್ರಿಸ್ತನ ಪುನರುತ್ಥಾನದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಹೀಗೆ ಈ ಭಾನುವಾರದಿಂದ ಮುಂದಿನ ಭಾನುವಾರದವರೆಗೂ ಪವಿತ್ರ ದಿನಗಳನ್ನಾಗಿ ಕ್ರೈಸ್ತ ಭಕ್ತರು ಆಚರಿಸಲಿದ್ದಾರೆ. 
    ಗರಿಗಳ ಭಾನುವಾರದಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ಧರ್ಮ ಭಗಿನಿಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.

No comments:

Post a Comment