Monday, May 19, 2025

ಮೋಹನ್‌ರಾವ್ ಗುಜ್ಜರ್ ನಿಧನ

ಮೋಹನ್‌ರಾವ್ ಗುಜ್ಜರ್ 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪದ ಶ್ರೀರಂಗನಾಥ ಟೆಕ್ಸ್‌ಟೈಲ್ಸ್‌ನ ಮೋಹನ್‌ರಾವ್ ಗುಜ್ಜರ್(೮೦) ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ನೆರವೇರಿತು. 
    ಪತ್ನಿ, ೩ ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಮೋಹನ್‌ರಾವ್ ಗುಜ್ಜರ್‌ರವರು ನಗರದಲ್ಲಿ ಶ್ರೀ ರಂಗನಾಥ ಟೆಕ್ಸ್ ಟೈಲ್ಸ್ ಆರಂಭಿಸುವ ಮೂಲಕ ಬಹಳ ವರ್ಷಗಳಿಂದ ಬಟ್ಟೆ ವ್ಯಾಪಾರ ಉದ್ಯಮಿದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಭಾವಸಾರ ಕ್ಷತ್ರಿಯ ಸಮಾಜದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ಭಾವಸಾರ ಕ್ಷತ್ರಿಯ ಸಮಾಜ, ಜೇಡಿಕಟ್ಟೆ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಸಂತಾಪ ಸೂಚಿಸಿದ್ದಾರೆ. 

No comments:

Post a Comment