Tuesday, June 10, 2025

ಜೂ.೧೧ರಿಂದ ವಿದ್ಯುತ್ ವ್ಯತ್ಯಯ

    

ಭದ್ರಾವತಿ : ಮೆಸ್ಕಾಂ ಘಟಕ-೨ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಮಾಡುವ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಜೂ.೧೧ರ ಬುಧವಾರ, ೧೩ರ ಶುಕ್ರವಾರ ಮತ್ತು ೧೫ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಭೂತನಗುಡಿ, ಮಾಧವನಗರ, ಗಾಂಧಿನಗರ, ಎನ್‌ಎಂಸಿ ರೋಡ್, ಗಾಂಧಿ ವೃತ್ತ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ಜೂ.೧೨ರ ಗುರುವಾರ, ೧೪ರ ಶನಿವಾರ ಮತ್ತು ೧೬ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಸಾದತ್ ಕಾಲೋನಿ, ನೆಹರು ನಗರ, ಪಿಡಬ್ಲ್ಯೂಡಿ ಕಚೇರಿ ಮುಂಭಾಗ ಮತ್ತು ಎಂ.ಎಂ ಕಾಂಪೌಂಡ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

No comments:

Post a Comment