ನಿಟ್ಟೂರು ರಾಜಶೇಖರ್
ಭದ್ರಾವತಿ : ನಗರದ ಲೋಯರ್ ಹುತ್ತಾ ನಿವಾಸಿ, ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್(೭೨) ಮಂಗಳವಾರ ನಿಧನ ಹೊಂದಿದರು.
ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಹಿರಿಯ ಪತ್ರಕರ್ತ ದಿವಂಗತ ನಿಟ್ಟೂರು ಶ್ರೀರಾಮ್ರವರ ಸಹೋದರರಾದ ರಾಜಶೇಖರ್ರವರು ಮಾಚೇನಹಳ್ಳಿ ಸಶಸ್ತ್ರ ಮೀಸಲು ಪಡೆ (ಕೆಎಸ್ಆರ್ಪಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ನಗರದ ಪೊಲೀಸ್ ಉಪಾಧೀಕ್ಷಕರ ಕಛೇರಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ರಾಜಶೇಖರ್ ಹಲವಾರು ವರ್ಷಗಳವರೆಗೆ ಪತ್ರಿಕಾ ವಿತರಕರಾಗಿ ಸಹ ಕಾರ್ಯ ನಿರ್ವಹಿಸಿದ್ದು, ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment