ಭದ್ರಾವತಿ ನಗರದ ಭಂಡಾರಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಧರ್ರವರ ತೋಟದಲ್ಲಿನ ತೆಂಗಿನ ಕಾಯಿಯೊಂದು ಭಾರಿ ಗಾತ್ರದಲ್ಲಿದ್ದು, ೧ ಕೆ.ಜಿ, ೮೦ ಗ್ರಾಂ. ತೂಕ ಹೊಂದಿದೆ.
ಭದ್ರಾವತಿ: ನಗರದ ಭಂಡಾರಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಧರ್ರವರ ತೋಟದಲ್ಲಿನ ತೆಂಗಿನ ಕಾಯಿಯೊಂದು ಭಾರಿ ಗಾತ್ರದಲ್ಲಿದ್ದು, ೧ ಕೆ.ಜಿ, ೮೦ ಗ್ರಾಂ. ತೂಕ ಹೊಂದಿದೆ.
ಹಲವು ಕೃಷಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿರುವ ಶ್ರೀಧರ್ರವರು ತಮ್ಮ ತೋಟದಲ್ಲಿ ಬೆಳೆದಿರುವ ತೆಂಗಿನ ಮರದಿಂದ ಕಾಯಿ ಕಿತ್ತುಕೊಂಡು ಬಂದಿದ್ದು, ನಂತರ ಅದನ್ನು ಸುಲಿದಾಗ ಕಾಯಿ ಭಾರಿ ಗಾತ್ರದಲ್ಲಿರುವುದು ಕಂಡು ಬಂದಿದೆ. ತೂಕ ಹಾಕಿ ನೋಡಿದಾಗ ೧ ಕೆ.ಜಿ ೮೦ ಗ್ರಾಂ. ಇರುವುದು ಕಂಡು ಬಂದಿದೆ.
ಈ ಹಿನ್ನಲೆಯಲ್ಲಿ ಪತ್ರಿಕೆಗೆ ಮಾಹಿತಿ ನೀಡಿದ ಶ್ರೀಧರ್ರವರು, ಇದು ಅಪರೂಪದ ತೆಂಗಿನ ಕಾಯಿಯಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ನಮ್ಮ ತೋಟದಲ್ಲಿ ಈ ತೆಂಗಿನ ಕಾಯಿ ಕಂಡು ಬಂದಿರುವುದು ಸಂತಸ ತಂದಿದೆ ಎಂದರು.
No comments:
Post a Comment