ಮಂಗಳವಾರ, ಜುಲೈ 15, 2025

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ

ಶ್ರೀ ಜಯತೀರ್ಥರ ಆರಾಧನೆ ಮೊಹೋತ್ಸವದ ಅಂಗವಾಗಿ ಮಂಗಳವಾರ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನೆ ಮೊಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ : ಶ್ರೀ ಜಯತೀರ್ಥರ ಆರಾಧನೆ ಮೊಹೋತ್ಸವದ ಅಂಗವಾಗಿ ಮಂಗಳವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆರಾಧನೆ ಮೊಹೋತ್ಸವ ವಿಜೃಂಭಣೆಯಿಂದ ನಡೆಯಿತು.
    ಬೆಳಗ್ಗೆ ಪಂಚಾಮೃತ ಅಭಿಷೇಕ, ಮೃತ್ಯುಕ ಗುರುರಾಜ ಅವರಿಂದ ಉಪನ್ಯಾಸ, ನಂತರ ಮಠದ ಪ್ರಕಾರದಲ್ಲಿಯೇ ರಥೋತ್ಸವ ಜರಗಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಬ್ರಾಹ್ಮಣರ ಪಾದ ತೊಳೆಯುವ ಕಾರ್ಯಕ್ರಮ ಹಾಗು ವಿವಿಧ ಭಜನಾ ಮಂಡಳಿಗಳಿಂದ ಜಯತೀರ್ಥರ ಸಂಕೀರ್ತನೆ ನಡೆಯಿತು. ಶ್ರೀ ಕೃಷ್ಣ ಚಂಡಿ ಬಳಗದಿಂದ ಚಂಡೆ ಉತ್ಸವ ವಿಜೃಂಭಣೆಯಿಂದ ಜರಗಿತು
    ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್, ಸತ್ಯನಾರಾಯಣಚಾರ್, ಸಮೀರಾಚಾರ್ ಹಾಗೂ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ, ಖಜಾಂಚಿ ನಿರಂಜನಾಚಾರ್ಯ ಮತ್ತು ಶುಭ ಗುರುರಾಜ್ ವಿದ್ಯಾನಂದ ನಾಯಕ, ಮಾಧುರಾವ್, ಗೋಪಾಲಕೃಷ್ಣ, ಸುಪ್ರೀತ ತಂತ್ರಿ ಸೇರಿದಂತೆ ಭಕ್ತ ವೃಂದದವರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ