ಸೋಮವಾರ, ಸೆಪ್ಟೆಂಬರ್ 1, 2025

ರೋಟರಿ ಕ್ಲಬ್ ೨೦೨೪-೨೫ನೇ ಸಾಲಿನ ಸಾಧನೆಗೆ ಪ್ರಶಸ್ತಿ

ಭದ್ರಾವತಿ ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ : ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದ ತಂಡ ಅವರ ಅವಧಿಯಲ್ಲಿ ಉತ್ತಮ ಹಣಕಾಸಿನ ನಿರ್ವಹಣೆ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಹಸಿರು ಜಾಗೃತಿ, ರಸ್ತೆ ಸಪ್ತಾಹ ಸುರಕ್ಷತೆ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಒಳಗೊಂಡಿವೆ. ಅಲ್ಲದೆ ವಿಭಿನ್ನತೆಯಿಂದ ಕೂಡಿರುವ ಕಾರ್ಯ ಯೋಜನೆಗಳನ್ನು ರೂಪಿಸುವ ಮೂಲಕ ಗಮನ ಸೆಳೆದಿತ್ತು. 
    ಪ್ರಶಸ್ತಿಯನ್ನು ರಾಘವೇಂದ್ರ ಉಪಾಧ್ಯಾಯರವರ ತಂಡ ಸ್ವೀಕರಿಸಿತು. ಪ್ರಮುಖರಾದ ಮಾಜಿ ಜಿಲ್ಲಾ ಗೌರ್‍ನರ್ ದೇವಾನಂದ್, ಜಿಲ್ಲಾ ಗೌರ್‍ನರ್ ಪಾಲಾಕ್ಷ, ನಾಗರಾಜ್, ವಸಂತ ಹೋಬಳಿದಾರ್ ಮತ್ತು ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. 
    ನಗರದ ರೋಟರಿ ಕ್ಲಬ್ ಪ್ರಮುಖರಾದ ಪ್ರಸಕ್ತ ಸಾಲಿನ ಅಧ್ಯಕ್ಷ ಶಿವಕುಮಾರ್, ಕೆ.ಎಚ್ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್ ರಾಜ್ ಮತ್ತು ನಿರಂಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ