ಮಂಗಳವಾರ, ಸೆಪ್ಟೆಂಬರ್ 2, 2025

ತಮ್ಮೋಜಿರಾವ್ ನಿಧನ

ತಮ್ಮೋಜಿರಾವ್     
    ಭದ್ರಾವತಿ : ತಾಲೂಕಿನ ಯರೇಹಳ್ಳಿ ಗ್ರಾಮದ ನಿವಾಸಿ ತಮ್ಮೋಜಿರಾವ್(೭೬) ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 
    ಪತ್ನಿ ಸುಮಿತ್ರಾಬಾಯಿ, ಹಾಲು ವಿತರಕ ಪುತ್ರ ನವೀನ್ ಹಾಗೂ ಪುತ್ರಿ ಇದ್ದಾರೆ.  ತಮ್ಮೋಜಿರಾವ್‌ರವರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಪಾರ್ಥಿವ ಶರೀರ ಮಂಗಳೂರಿನಿಂದ ಗ್ರಾಮಕ್ಕೆ ತರಲಿದ್ದು, ಬುಧವಾರ ಮಧ್ಯಾಹ್ನ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
    ತಮ್ಮೋಜಿರಾವ್ ನಿಧನಕ್ಕೆ ಯರೇಹಳ್ಳಿ ಗ್ರಾಮದ ಮುಖಂಡರು, ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ