ಭಾನುವಾರ, ಸೆಪ್ಟೆಂಬರ್ 14, 2025

ಶ್ರೀಕೃಷ್ಣನನ್ನು ಮನಃಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಸ್ಮರಿಸಿದರೆ ಸಾಕು ನಮ್ಮ ಎಲ್ಲಾ ಸಂಕಷ್ಠಗಳು ದೂರ

ಭದ್ರಾವತಿ ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಶ್ರೀ ಮಠದಲ್ಲಿ ಗುರುರಾಜ ಸೇವಾ ಸಮಿತಿ ಮತ್ತು ಕರಾವಳಿ ವಿಪ್ರ ಬಳಗದ ವತಿಯಿಂದ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಲಕ್ಷ್ಯ ತುಳಸಿ ಅರ್ಚನೆ ಏರ್ಪಡಿಸಲಾಗಿತ್ತು. 
    ದ್ರಾವತಿ: ಶ್ರೀಕೃಷ್ಣನನ್ನು ಮನಃಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಸ್ಮರಿಸಿದರೆ ಸಾಕು ನಮ್ಮ ಎಲ್ಲಾ ಸಂಕಷ್ಠಗಳನ್ನೂ ಸಹ ದೂರಮಾಡುತ್ತಾನೆ ಎಂದು ಪಂಡಿತ ಗೋಪಾಲಾಚಾರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಶ್ರೀ ಮಠದಲ್ಲಿ ಗುರುರಾಜ ಸೇವಾ ಸಮಿತಿ ಮತ್ತು ಕರಾವಳಿ ವಿಪ್ರ ಬಳಗದ ವತಿಯಿಂದ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಲಕ್ಷ್ಯತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಮಾಡುವುದರ ಮಹತ್ವದ ಕುರಿತು ಉಪನ್ಯಾಸ ನೀಡಿದರು. 
ದಾಸವರೇಣ್ಯೇರೇ ಹೇಳಿರುವಂತೆ ಶ್ರೀಕೃಷ್ಣನಿಗೆ ನಾವು ಏನೇ ಅರ್ಪಿಸಿದರೂ ಸಹ ತುಳಸಿ ಇಲ್ಲದ ಪೂಜೆಯನ್ನು ಅವನು ಸ್ವೀಕರಿಸುವುದಿಲ್ಲ. ಅದ್ದರಿಂದ ಶ್ರೀ ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಅವನಿಗೆ ಮನಃಪೂರ್ವಕವಾಗಿ ಅರ್ಪಿಸಿದರೆ ನಮ್ಮ ಜೀವನವನ್ನು ಅವನು ಪಾವನಗೊಳಿಸಿ ಮೋಕ್ಷ ನೀಡುತ್ತಾನೆ. ಅಂತಹ ತುಳಸಿ ಲಕ್ಷ್ಯಾರ್ಚನೆಯಲ್ಲಿ ಭಗವಂತನ ನಾಮಸ್ಮರಣೆ ಪೂರ್ವಕವಾಗಿ ಭಕ್ತಾಧಿಗಳು ಲಕ್ಷ್ಯವಿಟ್ಟು ಭಾಗವಹಿಸಿರುವುದಿರಂದ ಎಲ್ಲರಿಗೂ ಶ್ರೀಕೃಷ್ಣ ಸಕಲ ಮಂಗಳವನ್ನುಂಟುಮಾಡುತ್ತಾನೆ ಎಂದರು.
    ಶ್ರೀಕೃಷ್ಣನ ಮೂರ್ತಿಯನ್ನು ತೊಟ್ಟಿಲೊಳಗಿರಿಸಿ ತುಳಸಿ ಹಾಗೂ ಪುಷ್ಪಗಳೊಂದಿಗೆ ವಿಷ್ಣು ಸಹಸ್ರನಾಮಾವಳಿ ಪಠಣ ಹಾಗೂ ಶ್ರೀಕೃಷ್ಣನ ಮಂತ್ರ ಸ್ತೋತ್ರದೊಂದಿಗೆ ಅರ್ಚನೆ ಮಾಡಲಾಯಿತು. ಅರ್ಚನೆ ನಂತರ ಶ್ರೀಕ್ಥಷ್ಣಾರ್ಘ್ಯ, ಚಂದ್ರಾರ್ಘ್ಯನ್ನು ನೀಡಿ ಮಹಾಮಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.
    ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ತುಳಸಿಮಾಲೆಯ ಅಲಂಕಾರ ಕೈಗೊಳ್ಳಲಾಗಿತ್ತು. ಮಾಡಲಾಗಿತ್ತು. ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ ತಂತ್ರಿ, ಕಾರ್ಯದರ್ಶಿ ಜಿ. ರಮಾಕಾಂತ, ಖಜಾಂಚಿ ನಿರಂಜನ  ಹಾಗೂ ಪಂಡಿತ ಶ್ರೀನಿವಾಸಾಚಾರ್, ಶ್ರೀಮಠದ ಅರ್ಚಕರು, ಮಾಧುರಾವ್, ಜಯತೀರ್ಥ, ಶೇಷಗಿರಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ