ಶನಿವಾರ, ಅಕ್ಟೋಬರ್ 11, 2025

ಭಾರಿ ಗಾತ್ರದ ಮಳೆಯಿಂದ ಭತ್ತದ ಬೆಳೆಗೆ ಹಾನಿ

ಭದ್ರಾವತಿಯಲ್ಲಿ ಪ್ರಗತಿಪರ ರೈತ ಭಂಡಾರಹಳ್ಳಿ ಶ್ರೀಧರ್‌ರವರು ಬೆಳೆದಿರುವ ಭತ್ತದ ಬೆಳೆ ಭಾರಿ ಗಾತ್ರದ ಮಳೆಯಿಂದಾಗಿ ಹಾನಿಗೊಳಗಾಗಿದೆ.  
    ಭದ್ರಾವತಿ : ಕಳೆದ ೨ ದಿನಗಳ ಹಿಂದೆ ಸುರಿದ ಭಾರಿ ಗಾತ್ರದ ಮಳೆಯಿಂದಾಗಿ ಕ್ಷೇತ್ರದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದ್ದು,  ಪ್ರಗತಿಪರ ರೈತ ಭಂಡಾರಹಳ್ಳಿ ಶ್ರೀಧರ್ ಆತಂಕ ವ್ಯಕ್ತಪಡಿಸಿದ್ದಾರೆ. 
    ಕ್ಷೇತ್ರದ ಬಹುತೇಕ ವ್ಯಾಪ್ತಿಯಲ್ಲಿ ರೈತರು ಭತ್ತದ ಬೆಳೆದಿದ್ದು, ಭಾರಿ ಗಾತ್ರದ ಮಳೆಯಿಂದಾಗಿ ಹೂವಿನ ಹಂತದಲ್ಲಿರುವ ಭತ್ತದ ಬೆಳೆಗೆ ಹಾನಿಯಾಗಿದೆ. ಮುಂದಿನ ಒಂದೆಡೆರಡು ತಿಂಗಳಲ್ಲಿ ಬೀಜ ಕಟ್ಟುವ ಹಂತಕ್ಕೆ ಬೆಳೆ ತಲುಪಲಿದೆ. ಈ ಹಂತದಲ್ಲಿ ಬೀಜ ಸರಿಯಾಗಿ ಬೆಳವಣಿಗೆಯಾಗದೆ ಇಳುವಳಿ ಕುಸಿತವಾಗಲಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಶ್ರೀಧರ್ ಆತಂಕ ವ್ಯಕ್ತಪಡಿಸಿದ್ದಾರೆ. 
    ನಾಟಿ ವಿಳಂಬವಾಗಿ ನಡೆದಿರುವ ಬೆಳೆಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಸಂಕಷ್ಟಕ್ಕೆ ಒಳಗಾಗುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕೆಂದು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ