![](https://blogger.googleusercontent.com/img/b/R29vZ2xl/AVvXsEhpjjXLEW2pp8DX-Bb4lDh8_NK9cUfhIbQSaD-SRCr7BuxpMgdenDf8hK4UyU2welinRkNUA7jmunYzGAB58Ey_ZdcruUA-vhXf2f9IvozqAecY4Dc8O7ESWkiuBroqHD1ebOjtd1Z8U0yZ/s320-rw/Manipal-University-Arogya-Card-732569.jpg)
ಭದ್ರಾವತಿ, ಆ. ೮: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆಯೂ ಮಣಿಪಾಲ ಆರೋಗ್ಯ ಕಾರ್ಡ್ ೨೦೨೦ನೋಂದಾಣೆಗೆ ಚಾಲನೆ ನೀಡಲಾಗಿದೆ. ರಿಯಾಯಿತಿ ದರದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಬೇಕೆಂಬ ಉದ್ದೇಶದೊಂದಿಗೆ ಆರಂಭಗೊಂಡ ಯೋಜನೆ ಪ್ರಸ್ತುತ ೨೦ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಕಾರ್ಡ್ಗಳನ್ನು ಸುಲಭವಾಗಿ ನೋಂದಾಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದು, ಈ ಸ್ಮಾರ್ಟ್ ಕಾರ್ಡನ್ನು ಕಾರ್ಡುದಾರರಿಗೆ ಸ್ಥಳದಲ್ಲೇ ನೀಡಲಾಗುವುದು. ಪ್ರತಿಯೊಬ್ಬರು ಯಾವಾಗಲು ತಮ್ಮ ಬಳಿ ಇಟ್ಟು ಕೊಳ್ಳಲು ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡ್ ರೂಪಿಸಲಾಗಿದೆ.
೧ ಮತ್ತು ೨ ವರ್ಷದ ನೋಂದಾಣಿಗೆ ಅವಕಾಶವಿದ್ದು, ಈ ಬಾರಿ ಈ ಯೋಜನೆ ವ್ಯಾಪ್ತಿಗೆ ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ಸಹ ತರಲಾಗಿದೆ. ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವ ಒಬ್ಬರಿಗೆ ರು. ೨೫೦, ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, ೨೫ ವರ್ಷದ ಒಳಗಿನ ಮಕ್ಕಳಿಗೆ ರು. ೫೦೦ ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, ೨೫ ವರ್ಷದ ಒಳಗಿನ ಮಕ್ಕಳು ಮತ್ತು ೪ ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. ೬೫೦ ನಿಗದಿಪಡಿಸಲಾಗಿದೆ.
೨ ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರು. ೪೦೦, ಕುಟುಂಬಕ್ಕೆ ರು. ೭೦೦ ಮತ್ತು ಕುಟುಂಬ ಪ್ಲಸ್ ಯೋಜನೆಗೆ ರು. ೮೫೦ ನಿಗದಿಪಡಿಸಿದ್ದು, ಕಾರ್ಡ್ನ್ನು ೧ ಅಥವಾ ೨ ವರ್ಷದ ಅವಧಿಯಲ್ಲಿ ಎಷ್ಟು ಬಾರಿಯಾದರೂ ಬಳಸಬಹುದಾಗಿದೆ.
ಮಣಿಪಾಲ ಆರೋಗ್ಯ ಕಾರ್ಡಿನ ಪ್ರತಿನಿಧಿಯಾಗುವವರು ಶ್ರೀನಿವಾಸ ಭಾಗವತ್ ಮೊ: ೮೧೦೫೨೮೨೧೪೫ ಸಂಪರ್ಕಿಸಬಹುದಾಗಿದೆ.
ಕಾರ್ಡ್ ನೋಂದಾಣಿಗೆ ಅಧಿಕೃತ ಪ್ರತಿನಿಧಿಗಳಾದ ಭದ್ರಾವತಿ ತಾಲೂಕಿನ ವಿಪ್ರ ಸೌಹರ್ಧ ಮೊ: ೯೭೩೯೦೮೦೫೯೯/ ೯೯೭೨೭೨೦೪೬೧, ಎಂ ಜಿ ಸುರೇಶ್ ಮೊ: ೯೮೪೫೬೮೧೩೬೩, ಡಿ ಶಬರಿವಾಸನ್ ಮೊ: ೯೦೩೫೬೧೬೧೮೮, ವೆಂಕಟಸುಬ್ರಾಯುಡು ಮೊ: ೭೮೪೮೮೩೩೫೬೮, ವೆಂಕಟೇಶ್ ಎ.ಜಿ ಮೊ: ೮೯೭೧೧೪೧೨೯೨ ಹಾಗೂ ಶಿವಮೊಗ್ಗ: ಎ.ಎನ್ ವಿಜೇಂದ್ರ ರಾವ್ ಮೊ: ೯೪೪೮೭೯೦೧೨೭ ಇವರನ್ನು ಸಂಪರ್ಕಿಸಬಹುದಾಗಿದೆ.