ಪ್ರಶಸ್ತಿ ಪತ್ರ, ಪದಕದೊಂದಿಗೆ ಜೆ. ಹೇಮಂತರಾಮನ್
ಭದ್ರಾವತಿ, ನ. ೫: ಬೆಂಗಳೂರಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ಅ.೧೦ರಿಂದ ನ.೪ರವರೆಗೆ ನಡೆದ "ಗೃಹರಕ್ಷಕರ ಅಧಿಕಾರಿಗಳ ತರಬೇತಿ"ಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಭದ್ರಾವತಿ ಘಟಕದ ಗೃಹರಕ್ಷಕ ಜೆ. ಹೇಮಂತರಾಮನ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಹೇಮಂತರಾಮನ್ ಈ ಹಿಂದೆ ಸಹ ಹಲವಾರು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟ ಎಸ್. ಶಿವಕುಮಾರ್, ಜಿಲ್ಲಾ ಸಹಾಯಕ ಬೋಧಕ ಎಚ್. ದಿನೇಶ್, ಭದ್ರಾವತಿ ಪ್ರಭಾರ ಘಟಕಾಧಿಕಾರಿ ಜಗದೀಶ್, ಎನ್.ಸಿ.ಓ ಅಧಿಕಾರಿಗಳು, ಘಟಕದ ಎಲ್ಲಾ ಗೃಹರಕ್ಷಕ ಸದಸ್ಯರುಗಳು ಅಭಿನಂದಿಸಿದ್ದಾರೆ.