ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್ಕುಮಾರ್ ಅವರನ್ನು ವರಿಷ್ಠೆ ಶಾರದ ಅಪ್ಪಾಜಿ ಅಭಿನಂದಿಸಿದರು.
ಭದ್ರಾವತಿ, ಸೆ. ೬: ಹಣ, ಅಧಿಕಾರಕ್ಕೆ ಜನ ಬೆಲೆ ಕೊಡುವುದಿಲ್ಲ. ಕೆಲಸ ಮಾಡುವವರಿಗೆ ಜನರು ಬೆಂಬಲಿಸುತ್ತಾರೆ ಎಂಬುದು ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಜೆಡಿಎಸ್ ವರಿಷ್ಠೆ ಶಾರದ ಅಪ್ಪಾಜಿ ಹೇಳಿದರು.
ಅವರು ಸೋಮವಾರ ವಾರ್ಡ್ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಆರ್. ನಾಗರತ್ನ ಅನಿಲ್ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಚುನಾವಣೆಯಲ್ಲಿ ಮತದಾರರು ನಮ್ಮ ಪರವಾಗಿ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಕ್ಷೇತ್ರದ ಮತದಾರರು ಎಂದಿಗೂ ನಮ್ಮೊಂದಿಗಿದ್ದಾರೆ. ಮತದಾರರಿಗೆ ಹಾಗು ಅತಿ ಹೆಚ್ಚಿನ ಅಂತರದ ಗೆಲುವಿಗೆ ಕಾರಣಕರ್ತರಾಗಿರುವ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ:
ಜೆಡಿಎಸ್ ಅಭ್ಯರ್ಥಿ ಗೆಲುವು ಘೋಷಣೆಯಾಗುತ್ತಿದ್ದಂತೆ ತಾಲೂಕು ಕಛೇರಿ ಮುಂಭಾಗ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಲು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ನಂತರ ಮೆರವಣಿಗೆ ಮೂಲಕ ಬಿ.ಎಚ್ ರಸ್ತೆ, ಅಂಡರ್ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ತೆರಳಿ ಅಪ್ಪಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ವಾರ್ಡ್ ವ್ಯಾಪ್ತಿ ಬೃಹತ್ ಮೆರವಣಿಗೆ :
ವಾರ್ಡ್ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹಾಗು ಗೆಲುವು ಸಾಧಿಸಿದ ಅಭ್ಯರ್ಥಿ ಆರ್. ನಾಗರತ್ನಅನಿಲ್ಕುಮಾರ್ ಪರವಾಗಿ ಘೋಷಣೆ ಹಾಕುವ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಮುಖಂಡರಾದ ಎಸ್. ಕುಮಾರ್, ಎಂ.ಎ ಅಜಿತ್, ಅನಿಲ್ ಕುಮಾರ್, ಕರಿಯಪ್ಪ( ಕಬ್ಬಡಿ), ಕುಮಾರ್ (ಡಿವಿ ಪ್ಲಾಜಾ), ನಂಜುಂಡೇಗೌಡ (ಸೌದೆ), ಎಸ್.ಕೆ ಉಮೇಶ್, ಎಂ. ರಾಜು, ಲಕ್ಷ್ಮೀನಾರಾಯಣ್, ಬದ್ರಿನಾರಾಯಣ್, ಮೈಲಾರಪ್ಪ, ಸುರೇಶ್(ಕ್ಲಬ್), ಎಸ್.ಬಿ ಮೋಹನ್ರಾವ್, ಡಿ.ಟಿ ಶ್ರೀಧರ್, ಲೋಕೇಶ್ವರ ರಾವ್, ಬಳ್ಳಿ ಕೃಷ್ಣಪ್ಪ, ಪಾಪಣ್ಣ, ರಾಜಣ್ಣ, ನಾಗರಾಜ್, ಉದಯಕುಮಾರ್, ಕೋಟೇಶ್ವರರಾವ್, ದಿಲೀಪ್, ನಂಜುಂಡಪ್ಪ, ಮೋಹನ್(ಚಕ್ಲಿ), ಸತೀಶ್ (ಬಸ್), ಪವನ್, ಎಚ್.ಡಿ ನಾಗರಾಜ್, ರಾಮಕೃಷ್ಣ, ಎ.ಟಿ ರವಿ, ಆರ್. ಮೋಹನ್ಕುಮಾರ್, ಮಲ್ಲೇಶ್, ಸತೀಶ್(ಟೇಲರ್), ಬಾಬು, ಸುರೇಶ್ ಬಾಬು, ವಾಸು(ಬೆಣ್ಣೆ), ಯತೀಶ್(ಪಿಗ್ಮಿ), ರಮೇಶ್(ಡಾನ್), ಸುಬ್ಬಾರೆಡ್ಡಿ, ಶಂಕರ್, ಗಿರೀಶ್, ರಾಕೇಶ್, ರೂಪೇಶ್, ಹರೀಶ್, ಯಶವಂತ್, ರಮೇಶ್ ನಾಯ್ಕ, ಲೀಲಾವತಿ ಕೃಷ್ಣಪ್ಪ, ಭಾಗ್ಯಮ್ಮ ಮಂಜುನಾಥ್, ಪರಮೇಶ್ವರಿ, ಧನಲಕ್ಷ್ಮಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.