ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಹಾಗು ಸಹಾಯಕ ಸಿಬ್ಬಂದಿಯವರಿಗೆ ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಡಿ. ೩: ನಗರ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಹಾಗು ಸಹಾಯಕ ಸಿಬ್ಬಂದಿಯವರಿಗೆ ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಆಡಳಿತ ಮಂಡಳಿಯ ಹಿರಿಯ ಸದಸ್ಯ ಡಾ. ಮಹಾಬಲೇಶ್ವರ್, ಮುಖ್ಯ ಶಿಕ್ಷಕಿ ಶಕುಂತಲ ಹಾಗು ಸಹದ್ಯೋಗಿಗಳು ಶಿಕ್ಷಕಿಯರು ಹಾಗು ಸಹಾಯಕ ಸಿಬ್ಬಂದಿಯವರ ವೃತ್ತಿ ಸೇವೆಯನ್ನು ಸ್ಮರಿಸಿದರು.
ಶಿಕ್ಷಕಿಯರಾಗಿ ವೃತ್ತಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಾಂತಮ್ಮ, ಉಮಾದೇವಿ ಹಾಗು ಸಹಾಯಕ ಸಿಬ್ಬಂದಿ ಅನಸೂಯಮ್ಮ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್, ಖಜಾಂಚಿ ಎಚ್. ವಿಶ್ವನಾಥ್, ವಿಶ್ವಸ್ಥ ಮಂಡಳಿಯ ಮಧುಕರ್ ಕಾನಿಟ್ಕರ್, ಸುಭಾಷ್, ಶಿಕ್ಷಕಿಯರಾದ ಸುಜಾತ, ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.