ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ದೃಶ್ಯ ವೈರಲ್
ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಬಂದ ಮಹಿಳೆ ಸೇರಿದಂತೆ ಸುಮಾರು ಹತ್ತಿಪ್ಪತ್ತು ಜನರ ಎದುರು ಮತ್ತೋರ್ವ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದಿದೆ.
ಭದ್ರಾವತಿ: ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಬಂದ ಮಹಿಳೆ ಸೇರಿದಂತೆ ಸುಮಾರು ಹತ್ತಿಪ್ಪತ್ತು ಜನರ ಎದುರು ಮತ್ತೋರ್ವ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದಿದೆ.
ಮಧುಮಾಲಾ ವಿಷ ಕುಡಿದ ಮಹಿಳೆಯಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಇವರ ಪತಿ ಗಿರೀಶ್ ಪಾಟೀಲ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಚಂದ್ರಮ್ಮ ಎಂಬುವರು ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಖಾಸಗಿ ಕ್ಯಾಮೆರಾಮೆನ್ ಜೊತೆಗೆ ತೆರಲಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಗಿರೀಶ್ ಪಾಟೀಲ್ ಹಾಗು ಪತ್ನಿ ಮಧುಮಾಲಾ ಅವರ ಕುಟಂಬ ವ್ಯಾಜ್ಯ ತೆಗೆದಿದೆ. ಈ ವೇಳೆ ಮಧುಮಾಲಾ ವಿಷದ ಬಾಟಲಿ ಹಿಡಿದು ಕುಡಿಯಲು ಮುಂದಾಗಿದ್ದು, ಪತಿಯೇ ವಿಷ ಕುಡಿಯುವಂತೆ ಪ್ರಚೋದಿಸಿದ್ದಾರೆ. ಮಧುಮಾಲಾ ಸುಮಾರು ಅರ್ಧ ಬಾಟಲಿಯಷ್ಟು ವಿಷ ಕುಡಿದಿದ್ದು, ಈ ನಡುವೆ ಸ್ಥಳದಲ್ಲಿ ಹತ್ತಿಪ್ಪತ್ತು ಜನರಿದ್ದರೂ ಸಹ ಯಾರು ವಿಷ ಕುಡಿಯದಂತೆ ತಡೆಯಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಘಟನೆಗಳು ಚಿತ್ರೀಕರಣಗೊಂಡಿದೆ.
ಈ ಸಂಬಂಧ ಗಿರೀಶ್ ಪಾಟೀಲ್ ವಿರುದ್ಧ ಚಂದ್ರಮ್ಮ ಪತ್ನಿಗೆ ವಿಷ ಕುಡಿಯಲು ಪ್ರಚೋದಿಸಿದ್ದು, ಅಲ್ಲದೆ ಕ್ಯಾಮೆರಾಮೆನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಈ ನಡುವೆ ಪೊಲೀಸರು ಚೇತರಿಕೆಯಲ್ಲಿರುವ ಮಧುಮಾಲಾ ಹೇಳಿಕೆ ಪಡೆಯಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದ ಚಿತ್ರೀಕರಣಗೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪತಿ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.