ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪ ಎಸ್.ಜೆ ರಸ್ತೆಯಲ್ಲಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ `ಅಪ್ಪು ದಿ ಪ್ರಿಸ್ಕೂಲ್' ಪೂರ್ವ ಪ್ರಾಥಮಿಕ ಶಾಲೆಗೆ ಸೋಮವಾರ ಚಾಲನೆ ನೀಡಲಾಯಿತು.
ಭದ್ರಾವತಿ: ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪ ಎಸ್.ಜೆ ರಸ್ತೆಯಲ್ಲಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ `ಅಪ್ಪು ದಿ ಪ್ರಿಸ್ಕೂಲ್' ಪೂರ್ವ ಪ್ರಾಥಮಿಕ ಶಾಲೆಗೆ ಸೋಮವಾರ ಚಾಲನೆ ನೀಡಲಾಯಿತು.
ಪೂರ್ವ ಪ್ರಾಥಮಿಕ ಶಾಲೆ ಜೊತೆಗೆ ಸರಳ ಮಾಸ್ಟರ್ ಮೈಂಡ್ಸ್ ಟ್ಯುಟೊರಿಯಲ್ ಸಹ ಆರಂಭಗೊಂಡಿದ್ದು, ೫ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ೫ ಗಂಟೆಯಿಂದ ನುರಿತ ಶಿಕ್ಷಕರಿಂದ ಪಾಠ ಹೇಳಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿಕ್ಷಣದ ಮಹತ್ವ ಅರಿತು ಸವಿತಾ ಸಮಾಜದವರು ಒಟ್ಟುಗೂಡಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ಆರಂಭಿಸಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. ಬೆಳಿಗ್ಗೆ ಸರಸ್ವತಿ ಪೂಜೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಆಚರಣೆಗಳು ನೆರವೇರಿದವು.
ನಗರಸಭೆ ಸದಸ್ಯರಾದ ನಾಗರತ್ನ ಅನಿಲ್ಕುಮಾರ್, ಕೋಟೇಶ್ವರ ರಾವ್, ಸವಿತಾ ಸಮಾಜದ ಮುಖಂಡರಾದ ರಮೇಶ್, ಎಂ. ರಾಜು, ವರದರಾಜ್ ಸೇರಿದಂತೆ ಹಲವರು ಹಾಜರಿದ್ದರು.