ಭದ್ರಾವತಿ: ನಗರದ ಮೆಸ್ಕಾಂ ೧೧೦/೧೧ ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಮೇ.೨ರಂದು ಮೊದಲನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ಭದ್ರಾವತಿ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉಂಟಾಗುತ್ತಿರುವ ವಿದ್ಯುತ್ ಅಡಚಣೆಗಳನ್ನು ಸರಿಪಡಿಸಲು ಎಂಆರ್ಎಸ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜನ್ನು ಬದಲಿಸಿ ಕಡೂರು-ಶಿವಮೊಗ್ಗ ೧೧೦ ಕೆವಿ ಮಾರ್ಗದಿಂದ ನೀಡಲು ಮುಂದಾಗಿರುವ ಕಾರಣ ಅಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಭದ್ರಾವತಿ ನಗರ, ಅಂತರಗಂಗೆ, ಉಬ್ರಾಣಿ, ಹಿರಿಯೂರು, ಕಾರೇಹಳ್ಳಿ, ದೊಣಮಘಟ್ಟ, ಬಾರಂದೂರು, ತಡಸ, ಬಿಳಿಕಿ, ಬೊಮ್ಮೆನಹಳ್ಳಿ, ದೊಡ್ಡೇರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಭದ್ರಾವತಿ ನಗರ, ಅಂತರಗಂಗೆ, ಉಬ್ರಾಣಿ, ಹಿರಿಯೂರು, ಕಾರೇಹಳ್ಳಿ, ದೊಣಮಘಟ್ಟ, ಬಾರಂದೂರು, ತಡಸ, ಬಿಳಿಕಿ, ಬೊಮ್ಮೆನಹಳ್ಳಿ, ದೊಡ್ಡೇರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
No comments:
Post a Comment