Friday, May 29, 2020

ಜು.೩೧ರ ವರೆಗೆ ತೆರಿಗೆ ಪಾವತಿಗೆ ಶೇ.೫ರಷ್ಟು ರಿಯಾಯಿತಿ

ಭದ್ರಾವತಿ, ಮೇ. ೨೯: ನಗರಸಭೆ ಆಸ್ತಿ ತೆರಿಗೆದಾರರು ಜು.೩೧ರವರೆಗೆ ತೆರಿಗೆ ಪಾವತಿಸಲು ಸರ್ಕಾರ ಕಾಲಾವಕಾಶ ನೀಡಿದ್ದು, ತೆರಿಗೆದಾರರು ಇದರ ಸದುಪಯೋಗದೊಂದಿಗೆ ಶೇ.೫ರಷ್ಟು ರಿಯಾಯಿತಿ ಪಡೆಯುವಂತೆ ಪೌರಾಯುಕ್ತರು ಕೋರಿದ್ದಾರೆ. 
ಜುಲೈ ೩೧ರೊಳಗೆ ತೆರಿಗೆ ಪಾವತಿಸಿದ್ದಲ್ಲಿ ಶೇ.೫ ರಿಯಾಯಿತಿ, ಆಗಸ್ಟ್ ೧ ರಿಂದ ಅಕ್ಟೋಬರ್ ೩೧ರ ವರೆಗೆ ದಂಡ ರಹಿತ ತೆರಿಗೆ ಪಾವತಿಸಬಹುದಾಗಿದೆ. ವಿಳಂಬವಾಗಿ ತೆರಿಗೆ ಪಾವತಿಸಿದ್ದಲ್ಲಿ ನವಂಬರ್ ೧ ರಿಂದ ಶೇ.೨ರಷ್ಟು ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಮನೋಹರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

No comments:

Post a Comment