Friday, May 29, 2020

ಪತ್ರಕರ್ತ ಸಾ.ನ. ಗೋವಿಂದರಾಜು ನಿಧನ

ಸಾ.ನ. ಗೋವಿಂದರಾಜು 
ಭದ್ರಾವತಿ, ಮೇ. ೨೯: ಹಲವಾರು ವರ್ಷಗಳಿಂದ ನಗರದಲ್ಲಿ ಪ್ರಕಟವಾಗುತ್ತಿರುವ ಮಾಸ ಪತ್ರಿಕೆಯೊಂದರ ಸಂಪಾದಕ ಸಾ.ನ. ಗೋವಿಂದರಾಜು(೬೫) ನಿಧನ ಹೊಂದಿದರು.
ಪತ್ನಿ, ೧ ಹೆಣ್ಣು, ೨ ಗಂಡು ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ ವಾಸವಿದ್ದರು. ಮೃತರ ನಿಧನಕ್ಕೆ ಕಾಗದ ನಗರ ಗ್ರಂಥಾಲಯದ ಮೇಲ್ವಿಚಾರಕ ರಾಜ್‌ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.  

No comments:

Post a Comment