Wednesday, July 8, 2020

ಕುಡಿಯಲು ಹಣ ನೀಡದ ವೃದ್ಧೆಯ ಕೊಲೆ

ಕುಡಿಯಲು ಹಣ ನೀಡದ ವೃದ್ಧೆಯೊಬ್ಬರನ್ನು ಕುಡುಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ಭದ್ರಾವತಿ ತಾಲೂಕಿನ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಷ್ಕೆಂಟ್ ನಗರದಲ್ಲಿ ನಡೆದಿರುವುದು. 
ಭದ್ರಾವತಿ, ಜು. ೮: ಕುಡಿಯಲು ಹಣ ನೀಡದ ವೃದ್ಧೆಯೊಬ್ಬರನ್ನು ಕುಡುಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಷ್ಕೆಂಟ್ ನಗರದಲ್ಲಿ ನಡೆದಿದೆ. 
ಕಿಟ್ಟಮ್ಮ(೭೫) ಕೊಲೆಯಾದ ದುರ್ದೈವಿಯಾಗಿದ್ದು, ಇನ್ನೊಬ್ಬ ವೃದ್ಧೆ ಪಾಪಮ್ಮ(೭೨) ತೀವ್ರವಾಗಿ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 
ವೃದ್ಧೆಯನ್ನು ಕುಡುಗೋಲಿನಿಂದ ಕೊಲೆ ಮಾಡಿದ ಅರುಣ್‌ಕುಮಾರ್‌ನನ್ನು ಗ್ರಾಮಸ್ಥರು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದರು. 
           ಮೃತ ವೃದ್ಧೆಯ ಮೊಮ್ಮಗ ಅರುಣ್‌ಕುಮಾರ್(೨೮) ಮದ್ಯವ್ಯಸನಿಯಾಗಿದ್ದು, ಅಲ್ಲದೆ ಗಾಂಜಾ ಸೇವನೆ ಸಹ ಮಾಡುತ್ತಿದ್ದನು. ಈತ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಕುಡಿಯಲು ಅಜ್ಜಿ ಕಿಟ್ಟಮ್ಮ ಬಳಿ ಹಣ ನೀಡಲು ಪೀಡಿಸಿದ್ದು, ಹಣ ಕೊಡಲು ನಿರಾಕರಿಸಿದ ಕಾರಣ ಅಜ್ಜಿಯನ್ನು ಕುಡುಕೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅಜ್ಜಿಯನ್ನು ಬಿಡಿಸಲು ಬಂದ ಸಂಬಂಧಿಕರಾದ ವೃದ್ಧೆ ಪಾಪಮ್ಮ ಮೇಲೂ ಹಲ್ಲೆ ನಡೆಸಿದ್ದಾನೆ. 
ಗ್ರಾಮಸ್ಥರು ಈತನನ್ನು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೊಸಮನೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

No comments:

Post a Comment