Thursday, July 23, 2020

ಉಕ್ಕಿನ ನಗರದಲ್ಲಿ ಪುನಃ ಸೋಂಕು ಹೆಚ್ಚಳ : ಒಂದೇ ದಿನ 19 ಪ್ರಕರಣ ಪತ್ತೆ

ಭದ್ರಾವತಿ, ಜು. ೨೩: ತಾಲೂಕಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ 19 ಪ್ರಕರಣ ದಾಖಲಾಗಿವೆ. 
ನಗರಸಭೆ ವ್ಯಾಪ್ತಿಯ ನ್ಯೂಟೌನ್ ಭಾಗದಲ್ಲಿ 42 ವರ್ಷದ ಮಹಿಳೆ, ಹುಡ್ಕೋ ಕಾಲೋನಿಯಲ್ಲಿ 22 ವರ್ಷ ಯುವತಿ, 48 ವರ್ಷದ ಮಹಿಳೆ, ಬೋವಿ ಕಾಲೋನಿಯಲ್ಲಿ 65 ವರ್ಷದ ವ್ಯಕ್ತಿ, ಬಿ.ಎಚ್ ರಸ್ತೆ ವಿಜಯ ಬ್ಯಾಂಕ್  ಬಳಿ 29 ವರ್ಷದ ಯುವಕ, ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿ 58 ವರ್ಷದ ವ್ಯಕ್ತಿ, ಹೊಸಮನೆ ಮುಖ್ಯರಸ್ತೆಯಲ್ಲಿ 75 ವರ್ಷ ವೃದ್ಧ, ಶಿವರಾಮ ನಗರದಲ್ಲಿ 17 ವರ್ಷದ ಯುವತಿ, 19 ವರ್ಷದ ಯುವಕ, ೫೮ ಮತ್ತು ೩೮ ವರ್ಷದ ಮಹಿಳೆ ಮತ್ತು ಖಲಂದರ್ ನಗರದಲ್ಲಿ 66 ವರ್ಷದ ಮಹಿಳೆ ಹಾಗೂ 74 ವರ್ಷದ ವೃದ್ಧ ಸೋಂಕಿಗೆ ಒಳಗಾಗಿದ್ದಾರೆ. 
ಉಳಿದಂತೆ ಗ್ರಾಮಾಂತರ ಭಾಗದಲ್ಲಿ ದೇವರನರಸೀಪುರ ಗ್ರಾಮದ 6 ವರ್ಷದ ಹೆಣ್ಣು ಮಗು, 32 ವರ್ಷದ ಮಹಿಳೆ ಹಾಗೂ ಬಾರಂದೂರು ಗ್ರಾಮದಲ್ಲಿ 44 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.  ಒಟ್ಟು  ತಾಲೂಕಿನಲ್ಲಿ 19  ಸೋಂಕು ಕಂಡುಬಂದಿದೆ.
   ಕಳೆದ 2 ದಿನಗಳ ಹಿಂದೆ ಒಂದೇ ದಿನ 10 ಪ್ರಕರಣ ಪತ್ತೆಯಾಗಿತ್ತು. ಇದೀಗ ಏಕಾಏಕಿ 19ಕ್ಕೆ ಏರಿಕೆಯಾಗಿದೆ. ಇದರಿಂದಾಗಿನಗರ ಹಾಗೂ ಗ್ರಾಮಾಂತರ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.

No comments:

Post a Comment