ಭದ್ರಾವತಿ, ಜು. ೨೧: ತಾಲೂಕಿನ ಹಳ್ಳಿಕೆರೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜು.೨೨ ಮತ್ತು ೨೪ರಂದು ಎರಡು ದಿನ ರೈತರಿಗೆ ಆನ್ಲೈನ್ ಮೂಲಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಜು.೨೨ರ ಮಧ್ಯಾಹ್ನ ೩ ಗಂಟೆಯಿಂದ ಮಧ್ಯಾಹ್ನ ೪ವರೆಗೆ ಹವಾಮಾನ ಮತ್ತು ಕೃಷಿ ವಿಷಯ ಕುರಿತು ಶಿವಮೊಗ್ಗ ಕೃಷಿ ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಗ್ರಾಮೀಣ್ ಕೃಷಿ ಮೌಸಮ್ ಪ್ರಾಜೆಕ್ಟ್ ತಾಂತ್ರಿಕ ಅಧಿಕಾರಿ ಡಾ. ಪ್ರದೀಪ್ ಗೋಪಕ್ಕಲಿ ಮಾಹಿತಿ ನೀಡಲಿದ್ದು, ಗೂಗಲ್ ಮೀಟ್ ಲಾಗಿನ್ ಐ.ಡಿ ಡಬ್ಲ್ಯೂಟಿಎಸ್-ಎಐಎಸ್ಕೆ-ಎಎಂಎನ್(Wts-aisk-amn), ಲಿಂಕ್ಎಚ್ಟಿಟಿಪಿಎಸ್://ಮೀಟ್.ಗೂಗಲ್. ಕಾಂ. ಡಬ್ಲ್ಯೂ/ಡಬ್ಲ್ಯೂಟಿಎಸ್-ಎಐಎಸ್ಕೆ-ಎಎಂಎನ್(https://meet.google.com/Wts-aisk-amn) ಸಂಪರ್ಕಿಸಬಹುದಾಗಿದೆ.
೨೪ರಂದು ಮಧ್ಯಾಹ್ನ ೩.೩೦ ರಿಂದ ೫ ಗಂಟೆ ವರೆಗೆ ಭತ್ತದ ಬೆಳೆಯಲ್ಲಿ ತಾಂತ್ರೀಕರಣ ವಿಷಯ ಕುರಿತು ತಾಲೂಕು ಕೃಷಿ ಇಲಾಕೆ ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ಬಿ. ರಾಕೇಶ್ ಮಾಹಿತಿ ನೀಡಲಿದ್ದು, ಲಾಗಿನ್ ಐ.ಡಿ ಕೆ.ಎಚ್.ಎಫ್-ಸಿಡಿವಿಎ-ಬಿಎಓ(khf-cdva-bao), ಲಿಂಕ್ ಎಚ್ಟಿಟಿಪಿಎಸ್://ಮೀಟ್.ಗೂಗಲ್.ಕಾಂ.ಡಬ್ಲ್ಯೂ/ಕೆ.ಎಚ್.ಎಫ್-ಸಿಡಿವಿಎ-ಬಿಎಓ(https://meet.google.com/khf-cdva-bao) ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
No comments:
Post a Comment