Wednesday, September 2, 2020

ಭೂಮಿಕಾ ವೇದಿಕೆಯಿಂದ ವಿಶೇಷ ಸ್ಪರ್ಧೆ : ೩ ಮಂದಿ ವಿಜೇತರು

ಭದ್ರಾವತಿ, ಸೆ. ೨: ನಾಡು, ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆ ವತಿಯಿಂದ ವಾಟ್ಸಪ್ ಮೂಲಕ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ೩ ಮಂದಿ ವಿಜೇತರಾಗಿದ್ದಾರೆ.
        ಕೊರೋನಾ ಸೋಂಕು ಭೀತಿ ನಡೆವೆಯೂ ಪ್ರಸ್ತುತ ವೇದಿಕೆ ಸದಸ್ಯರನ್ನು ಕ್ರಿಯಾಶೀಲರನ್ನಾಸುವ ಉದ್ದೇಶದೊಂದಿಗೆ ವೇದಿಕೆ ವತಿಯಿಂದ ' ಈ ಕೊರೋನಾ ಸಮಯದಲ್ಲಿ ನಿಮಗೆ ಆದ ತೊಂದರೆ ಮತ್ತು ಅನುಕೂಲ, ನೀವು ಕಲಿತ ಯಾವುದಾದರೂ ಹೊಸ ಹವ್ಯಾಸ ಮತ್ತು ಕೊರೋನಾ ಜಾಗೃತಿ ಬಗ್ಗೆ ನಿಮ್ಮ ಅನುಭವ' ವಿಷಯ ಕುರಿತು ೩ ರಿಂದ ೫ ನಿರ್ಮಿಸದ ಒಳಗೆ ಮಾತನಾಡಿದ ವಿಡಿಯೋ ಕಳುಹಿಸುವ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು.
         ಈ ಸ್ಪರ್ಧೆಯಲ್ಲಿ ಡಿ.ವಿ ರಮೇಶ್ ಮೊದಲನೇ, ಜಯಾಮಾಲ ಪೈ ಎರಡನೇ ಹಾಗೂ ಶೇಷಗಿರಿ ರಾವ್ ಕುಲಕರ್ಣಿ ಮೂರನೇ ಬಹುಮಾನ ಪಡೆದುಕೊಂಡಿದ್ದಾರೆಂದು ವೇದಿಕೆ ಅಪರಂಜಿ ಶಿವರಾಜ್ ತಿಳಿಸಿದ್ದಾರೆ.


No comments:

Post a Comment