Wednesday, September 2, 2020

ಮಾಜಿ ಶಾಸಕರ ಪುತ್ರ ಸಿ.ಕೆ ಅಸ್ಮತ್ ಪಾಷ ನಿಧನ

ಸಿ.ಕೆ ಅಸ್ಮತ್ ಪಾಷ
ಭದ್ರಾವತಿ, ಸೆ. ೨: ಕ್ಷೇತ್ರದ ಮಾಜಿ ಶಾಸಕ ಖುದ್ದೂಸ್ ಅನ್ವರ್‌ರವರ ಪುತ್ರ, ನ್ಯೂ ಕಾಲೋನಿ ನಿವಾಸಿ ಸಿ.ಕೆ ಅಸ್ಮತ್ ಪಾಷ ಅನಾರೋಗ್ಯದಿಂದ ನಿಧನ ಹೊಂದಿದರು.
     ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗು ಸಹಕಾರಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಅಂಜುಮನ್ ಎ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷರಾಗಿ, ಸೈಯದ್ ಸಾದತ್ ದಾರುಲ್ ಉಲುಮ್ ಮದರಸ ಅಧ್ಯಕ್ಷರಾಗಿ, ಸಂವಿಧಾನ ಉಳಿವಿಗಾಗಿ ಹೋರಾಟ ವೇದಿಕೆಯ ಹಿರಿಯ ಸದಸ್ಯರಾಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿ, ಸಹಕಾರ ಸಂಘದ ಅಧ್ಯಕ್ಷರಾಗಿ, ವಿಐಎಸ್‌ಎಲ್ ಕಾರ್ಮಿಕ ಸಂಘದ ಮುಖಂಡರಾಗಿ ಹಾಗು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
   ಇವರ ನಿಧನಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರು, ತಾಲೂಕು ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

No comments:

Post a Comment