ಶನಿವಾರ, ಅಕ್ಟೋಬರ್ 31, 2020

ರೈತರಿಂದ ಭೂಮಿ ಹುಣ್ಣಿಮೆ ಪೂಜೆ

ಭದ್ರಾವತಿ ತಾಲೂಕಿನ ವಿವಿಧೆಡೆ ಆಶ್ವಿಜ ಮಾಸದ ಪೌರ್ಣಿಮೆ ದಿನ ಶನಿವಾರ ರೈತರು ಸಾಂಪ್ರದಾಯಿಕವಾಗಿ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೧: ತಾಲೂಕಿನ ವಿವಿಧೆಡೆ ಆಶ್ವಿಜ ಮಾಸದ ಪೌರ್ಣಿಮೆ ದಿನ ಶನಿವಾರ ರೈತರು ಸಾಂಪ್ರದಾಯಿಕವಾಗಿ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು.
      ಮುಂಜಾನೆ ಹೊಲ, ಗದ್ದೆ, ತೋಟಗಳಲ್ಲಿ ಬೆಳೆಗಳ ನಡುವೆ ಚಪ್ಪರ ಹಾಕಿ ಭೂಮಿಯನ್ನು ಸಾರಿಸಿ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳ ನಡುವೆ ಕಳಸವಿಟ್ಟು, ವಿವಿಧ ಪುಷ್ಪಗಳಿಂದ ಅಲಂಕರಿಸಿ, ಬಾಳೆಕಂದು, ತಳಿರುತೋರಣಗಳಿಂದ ಸಿಂಗರಸಿ ಭೂ ಮಾತೆಯನ್ನು ಪೂಜೆಸಲಾಯಿತು. ಕೆಲವು ಭಾಗಗಳಲ್ಲಿ ತೋಟದಲ್ಲಿನ ಅಡಕೆ, ತೆಂಗಿನ ಮರಗಳಿಗೆ ಬಣ ಬಣ್ಣದ ಸೀರೆಗಳಿಂದ ಸಿಂಗರಿಸಿ ಭೂ ಮಾತೆಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ