Friday, January 1, 2021

ನೂತನ ವರ್ಷದ ಸಂಭ್ರಮಾಚರಣೆ : ಯುವಕ ಕಾಲು ಜಾರಿ ಕಾಲುವೆಗೆ ಬಿದ್ದು ಮೃತ

ಭದ್ರಾವತಿ, ಜ. ೧: ನೂತನ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಯುವಕನೋರ್ವ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ರಾತ್ರಿ ನಡೆದಿದೆ.
   ಹೊಸಮನೆ ಹನುಮಂತನಗರದ ನಿವಾಸಿ ಉಮೇಶ್(೨೪) ಮೃತಪಟ್ಟಿದ್ದು, ಈತ ಸ್ನೇಹಿತರೊಂದಿಗೆ ವರ್ಷಾಚರಣೆ ಸಂಭ್ರಮಕ್ಕೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಭದ್ರಾ ಕಾಲುವೆ ಬಳಿ ಸಂಭ್ರಮಾಚರಣೆಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


No comments:

Post a Comment