Monday, January 4, 2021

ಜೈನ ಮುನಿಗಳ ತಂಡ ಅಗಮನ : ಭವ್ಯ ಸ್ವಾಗತ

ಜೈನ ಧರ್ಮ ಗುರುಗಳಾದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ನೇತೃತ್ವದ ಜೈನ ಮುನಿಗಳ ತಂಡ ಸೋಮವಾರ ಭದ್ರವತಿ ನಗರಕ್ಕೆ ಆಗಮಿಸಿತು.
      ಭದ್ರಾವತಿ, ಜ. ೪: ಜೈನ ಧರ್ಮ ಗುರುಗಳಾದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ನೇತೃತ್ವದ ಜೈನ ಮುನಿಗಳ ತಂಡ ಸೋಮವಾರ ನಗರಕ್ಕೆ ಆಗಮಿಸಿತು.
     ತರೀಕೆರೆ ರಸ್ತೆ ಮಾರ್ಗವಾಗಿ ಆಗಮಿಸಿದ ತಂಡವನ್ನು ಬೆಳಿಗ್ಗೆ ೮ ಗಂಟೆಗೆ ನಗರದ ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಳಿ   ಜೈನ ಸಮಾಜದ ವತಿಯಿಂದ ಪ್ರಮುಖರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.  ನಂತರ ಹಳೇನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆದು ಜೈನ ಮಂದಿರಕ್ಕೆ ತಂಡವನ್ನು ಬರಮಾಡಿಕೊಳ್ಳಲಾಯಿತು. ಒಂದು ವಾರಗಳ ಕಾಲ ಧಾರ್ಮಿಕ ಪ್ರವಚನಗಳು ಹಾಗು ಶಿಬಿರಗಳಲ್ಲಿ ಪಾಲ್ಗೊಳ್ಳಲಿದೆ.
    ಮೂಲತಃ ನಗರದ ಪೂರ್ವಶ್ರಮದ ನಿವಾಸಿಗಳಾದ ಮುನಿಶ್ರೀ ರುಷಿಪಾಲ್ ವಿಜಯ್ ಜೀ ಮತ್ತು ಮುನಿಶ್ರೀ ಖಿಮಾರತ್ನ ವಿಜಯ್ ಜೀ ಸಹ ತಂಡದಲ್ಲಿ ಆಗಮಿಸಿದ್ದು, ಈ ಇಬ್ಬರು ನಗರದ ನಿವಾಸಿಗಳಾದ ದಿನೇಶ್ ಕುಮಾರ್ ಜೈನ್ ಹಾಗು ರಾಚೋಲ್ ಜೈನ್ ದಂಪತಿ ಪುತ್ರರಾಗಿದ್ದು, ಈ ಹಿಂದೆ ನಗರಕ್ಕೆ ಆಗಮಿಸಿದ್ದ ಆಚಾರ್ಯ ಶ್ರೀ ಹೀರಾಚಂದ್ರ ವಿಜಯ್ ಜೀ ರವರ ಧಾರ್ಮಿಕ ಪ್ರವಚನದಿಂದ ಪ್ರಭಾವಿತರಾಗಿ ಸನ್ಯಾಸ ಧೀಕ್ಷೆ ಪಡೆದು ದೇಶದಾದ್ಯಂತ ಧರ್ಮ ಪ್ರಚಾರ ಕೈಗೊಂಡು ಇದೇ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿರುವುದು ವಿಶೇಷವಾಗಿದೆ.



No comments:

Post a Comment