Wednesday, February 3, 2021

ಪುಶು ವೈದ್ಯರಿಂದ ಕಾನೂನು ಉಲ್ಲಂಘಿಸಿ ಗೋ ಸಾಗಾಣಿಕೆಗೆ ಪರವಾನಗಿ

ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರಿಂದ ಕಾರ್ಯಾಚರಣೆ : ದೂರು

ಕಾನೂನು ಉಲ್ಲಂಘಿಸಿ ಹೆಚ್ಚಿನ ಗೋವುಗಳ ಸಾಗಾಣಿಕೆಗೆ ಪರವಾನಗಿ ನೀಡಿರುವ ಪಶು ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಿದರು.
    ಭದ್ರಾವತಿ, ಫೆ. ೩:  ಕಾನೂನು ಉಲ್ಲಂಘಿಸಿ ಹೆಚ್ಚಿನ ಗೋವುಗಳ ಸಾಗಾಣಿಕೆಗೆ ಪರವಾನಗಿ ನೀಡಿರುವ ಪಶು ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಿರುವ ಘಟನೆ ನಡೆದಿದೆ.
   ತಾಲೂಕಿನ ಅಂತರಗಂಗೆ ಗ್ರಾಮದಿಂದ ೩ ಗೋವುಗಳನ್ನು ಟಾಟಾ ಮೆಗಾ ವಾಹನದಲ್ಲಿ ಸಾಗಾಣಿಕೆ ಮಾಡಲು ಫೆ.೨ರಂದು ಪಶು ವೈದ್ಯ ಡಾ. ಕೆ. ರವೀಂದ್ರ ಎಂಬುವರು ಪರವಾನಗಿ ನೀಡಿದ್ದು, ಮಂಗಳವಾರ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದಾಗ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಹೆಚ್ಚಿನ ಗೋವುಗಳು ಕಂಡು ಬಂದಿದ್ದು, ಜೊತೆಗೆ ಒಂದು ಗೋವು ಗರ್ಭಿಣಿ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಈ ಗೋವು ಸಾಗಾಣಿಕೆ ಮಾಡುವುದು ಕಷ್ಟಕರವಾಗಿದೆ. ಪಶು ವೈದ್ಯರು ಯಾವುದೇ ಅಂಶವನ್ನು ಪರಿಗಣಿಸದೆ ನಿರ್ಲಕ್ಷ್ಯತನ ವಹಿಸಿ ಪರವಾನಗಿ ನೀಡಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ತನಿಖೆ ಕೈಗೊಂಡು ಗೊಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
   ಕಾರ್ಯಾಚರಣೆಯಲ್ಲಿ ಪ್ರಮುಖರಾದ ಚರಣ್ ದೇವಾಂಗ, ಚಂದನ್‌ರಾವ್, ಮನುಗೌಡ, ಲತೇಶ್ ಶೆಟ್ಟಿ, ವಿನೋದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಸಾಗಾಣಿಕೆಗೆ ಪರವಾನಗಿ ಪಡೆದ ಗೋವುಗಳಿಗಿಂತ ಹೆಚ್ಚಿನ ಗೋವುಗಳನ್ನು ಸಾಗಾಣಿಕೆ ಮಾಡುತ್ತಿರುವುದು.

No comments:

Post a Comment