Saturday, March 20, 2021

೧೮ ವರ್ಷ ಸೇವೆ ಸಲ್ಲಿಸಿ ಮರಳಿ ಬಂದ ವೀರ ಯೋಧನಿಗೆ ಅಭಿನಂದನೆ

ಹೆಬ್ಬಂಡಿ ತಾಂಡಾ ಎಚ್.ಪಿ ಮೋಹನ್ ಮೇಘಾಲಯ, ಜಮ್ಮು-ಕಾಶ್ಮೀರ, ಚೀನಾ ಗಡಿಯಲ್ಲಿ ಕರ್ತವ್ಯ


ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ಭದ್ರಾವತಿ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೨೦: ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ತಾಂಡಾದ ದಿವಂಗತ ಪೀಕ್ಯಾನಾಯ್ಕ, ರುಕ್ಮಿಣಿ ಬಾಯಿರವರ ಪುತ್ರರಾಗಿರುವ ಎಚ್.ಪಿ ಮೋಹನ್ ೨೦೦೨-೦೩ರಲ್ಲಿ ಭಾರತೀಯ ಸೇನೆಗೆ ಸೇವೆಗೆ ಸೇರಿದ್ದು, ಮೇಘಾಲಯ, ಜಮ್ಮು-ಕಾಶ್ಮೀರ ಹಾಗು ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ್ದಾರೆ.
   ಎಚ್.ಪಿ ಮೋಹನ್ ಮರಳಿ ಬಂದ ಹಿನ್ನಲೆಯಲ್ಲಿ ತಾಂಡಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರು, ತಾಂಡಾ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಮುಖ್ಯ ಶಿಕ್ಷಕರಾದ ಹನುಮಂತನಾಯ್ಕ, ಎಸ್. ಕೂಬಾನಾಯ್ಕ, ಜಮೀನ್ದಾರ್ ಪ್ರೇಮ್‌ಕುಮಾರ್, ಆನಂದನಾಯ್ಕ, ಎಂ.ಎಸ್ ನಾಯ್ಕ, ಕೇಶವಮೂರ್ತಿ ಮತ್ತು ಪಿ. ಧನಂಜಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment