Sunday, May 9, 2021

ಪಿಡಬ್ಲ್ಯೂಡಿ ನೌಕರ ಕೃಷ್ಣ ಕೊರೋನಾ ಸೋಂಕಿಗೆ ಬಲಿ

    
ಕೃಷ್ಣ
   ಭದ್ರಾವತಿ, ಮೇ. ೯: ಲೋಕೋಪಯೋಗಿ ಇಲಾಖೆ ಡಿ ಗ್ರೂಪ್ ನೌಕರರಾಗಿ ಶಿಕಾರಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಹುಣಸೇಕಟ್ಟೆ ಗ್ರಾಮದ ನಿವಾಸಿ ಕೃಷ್ಣ(೩೯) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
   ಪತ್ನಿ, ಓರ್ವ ಪುತ್ರಿ ಹಾಗು ಓರ್ವ ಪುತ್ರನನ್ನು ಹೊಂದಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು ೧೫ ವರ್ಷ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ಕಳೆದ ೨ ವರ್ಷಗಳ ಹಿಂದೆ ಕಾಯಂಗೊಂಡಿದ್ದರು. ಇವರ ನಿಧನಕ್ಕೆ ಹುಣಸೇಕಟ್ಟೆ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.  

No comments:

Post a Comment