Tuesday, May 11, 2021

ಸಂಕಷ್ಟಕ್ಕೆ ಒಳಗಾದವರ ಹಸಿವು ನೀಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು


ಭದ್ರಾವತಿಯಲ್ಲಿ  ಜೀವಾಮೃತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಸಿದ್ದಪಡಿಸಿ ವಿತರಣೆಗೆ ಸಿದ್ದಗೊಳಿಸುತ್ತಿರುವುದು.
   ಭದ್ರಾವತಿ, ಮೇ. ೧೧: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ದೀನಾದಲಿತರು, ನಿಗರ್ತಿಕರು, ಅಸಹಾಯಕರು ಹಾಗು ಭಿಕ್ಷುಕರ ಹಸಿವು ನೀಗಿಸುವ ನಿಟ್ಟಿನಲ್ಲಿ ಮುಂದಾಗಿವೆ.  
   ನಗರದ ಜೀವಾಮೃತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುಪ್ರಕಾಶ್ ಆಚಾರ್ಯ ನೇತೃತ್ವದಲ್ಲಿ ಕಳೆದ ೮ ದಿನಗಳಿಂದ ನಿರಂತರವಾಗಿ ಸಿದ್ದಪಡಿಸಿದ ಆಹಾರವನ್ನು ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಕಂಡು ಬರುವ ಭಿಕ್ಷುಕರು, ನಿರ್ಗತಿಕರು, ಅಸಹಾಯಕರು ಹಾಗು ತುರ್ತು ಸೇವೆಯಲ್ಲಿ ತೊಡಗಿರುವ ಆರಕ್ಷಕ, ಗೃಹ ರಕ್ಷಕ ಸಿಬ್ಬಂದಿಗಳಿಗೆ ವಿತರಿಸುವ ಮೂಲಕ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದೆ.

    


ಭದ್ರಾವತಿ ಕೇಸರಿ ಪಡೆ ವತಿಯಿಂದ ಆಹಾರ ಸಿದ್ದಪಡಿಸಿ ವಿತರಣೆಗೆ ಸಿದ್ದಗೊಳಿಸುತ್ತಿರುವುದು.
       ೭ ದಿನಗಳಿಂದ ಹಸಿವು ನೀಗಿಸುವ ಕಾರ್ಯದಲ್ಲಿ ಕೇಸರಿಪಡೆ :
    ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಕೇಸರಿಪಡೆ ಹಲವಾರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲೂ ಬಡವರ ನೆರವಿಗೆ ಧಾವಿಸಿತ್ತು. ಇದೀಗ ಕಳೆದ ೭ ದಿನಗಳಿಂದ ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಮಂಜುನಾಥ್ ಕೊಯ್ಲಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಸಿದ್ದಪಡಿಸಿದ ಆಹಾರವನ್ನು ಹಸಿವಿನಿಂದ ಬಳಲುತ್ತಿರುವ ಸಂಕಷ್ಟಕ್ಕೆ ಒಳಗಾದವರಿಗೆ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.



ಜಯ ಕರ್ನಾಟಕ ಸಂಘಟನೆ ಮುಖಂಡ, ಮಾಜಿ ಸೈನಿಕ ಮುಕುಂದ ಹಸಿದವರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು.
        ನೆರವಿಗೆ ಧಾವಿಸಿದ ಮಾಜಿ ಸೈನಿಕ :
ಜಯ ಕರ್ನಾಟಕ ಸಂಘಟನೆ ಮುಖಂಡ, ಮಾಜಿ ಸೈನಿಕ ಮುಕುಂದ ಈ ಬಾರಿ ಸಹ ಹಸಿದವರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಬಾರಿ ಲಾಕ್‌ಡೌನ್ ಅಂತ್ಯಗೊಳ್ಳುವವರೆಗೂ ನಿರಂತರವಾಗಿ ಸಿದ್ದಪಡಿಸಿದ ಆಹಾರ ವಿತರಣೆ ಜೊತೆಗೆ ದಿನನಿತ್ಯದ ಬಳಕೆಯ ತರಕಾರಿ, ದಿನಸಿ ಸಾಮಾಗ್ರಿಗಳನ್ನು ಸಹ ವಿತರಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದರು.

No comments:

Post a Comment