Tuesday, May 11, 2021

ಒಂದೇ ದಿನ ೨೯೦ ಮಂದಿಗೆ ಸೋಂಕು ಪತ್ತೆ : ಸಾವಿನ ಸಂಖ್ಯೆ ಅರ್ಧ ಶತಕ

   ಭದ್ರಾವತಿ, ಮಾ. ೧೧: ಸೆಮಿ ಲಾಕ್‌ಡೌನ್ ೨ನೇ ದಿನ ಸೋಂಕು ಮತ್ತಷ್ಟು ಸ್ಪೋಟಗೊಂಡಿದ್ದು, ಮಂಗಳವಾರ ಒಂದೇ ದಿನ ೨೯೦ ಮಂದಿಗೆ ಸೋಂಕು ದೃಢಪಟ್ಟಿದೆ.
   ಒಟ್ಟು ೨೬೯ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೨೯೦ ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ೫ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿಗೆ ಒಂದು ಬಲಿಯಾಗಿದ್ದು, ಇದುವರೆಗೂ ೫೦ ಮಂದಿ ಮೃತಪಟ್ಟಿದ್ದಾರೆ. ೨೭೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.
   ಸೋಮವಾರ ೨೪೮ ಮಂದಿಗೆ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ಸುಮಾರು ೫೦ ಸೋಂಕು ಹೆಚ್ಚಳವಾಗಿದೆ. ಇದರಿಂದಾಗಿ ಸೆಮಿ ಲಾಕ್‌ಡೌನ್ ನಡುವೆಯೂ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ.

No comments:

Post a Comment