ಮುಖ್ಯ ಶಿಕ್ಷಕ ಸುರೇಶಪ್ಪ
ಭದ್ರಾವತಿ, ಜೂ. ೧೫: ಹಳೇನಗರದ ಭೂತನಗುಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶಪ್ಪ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳವಾರ ನಿಧನ ಹೊಂದಿದರು.
ನಗರ ಆಹಾರ ಶಾಖೆಯ ಆಹಾರ ನಿರೀಕ್ಷಕಿ, ಪತ್ನಿ ಡಿ. ಗಾಯತ್ರಿ ದೇವಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಸುರೇಶಪ್ಪ ಮುಖ್ಯ ಶಿಕ್ಷಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ನಗರ ಆಹಾರ ಇಲಾಖೆ ನಿರೀಕ್ಷಕ ಎ.ಟಿ ಬಸವರಾಜ, ಗೋದಾಮು ವ್ಯವಸ್ಥಾಪಕ ಶ್ರೀಕಂಠೇಗೌಡ, ನಾಗರಾಜ್, ವಾಗೀಶ್, ಸತೀಶ್ ಹಾಗು ತಾಲೂಕು ಪಡಿತರ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
No comments:
Post a Comment