Tuesday, June 15, 2021

ವೃತ್ತಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣಗೊಳಿಸಿ

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ
     ಭದ್ರಾವತಿ ಜೂ. ೧೫ :  ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ರೈಲ್ವೆ ಕೆಳ ಸೇತುವೆ ಬಳಿ ನಗರಸಭೆ ವತಿಯಿಂದ ವೃತ್ತ ನಿರ್ಮಿಸಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡುವಂತೆ ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷಣ ಹಾಗು ಸ್ನೇಹಿತರು  ಒತ್ತಾಯಿಸಿದ್ದಾರೆ.
    ತಾಲೂಕಿನಾದ್ಯಂತ ಅನೇಕ ಆದರ್ಶಗಳ ವ್ಯಕ್ತಿಗಳ ಹೆಸರಿನಲ್ಲಿ ವೃತ್ತಗಳಿದ್ದು, ಮಹಾನ್ ಸಾಧಕರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಈ  ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಹ ಒಬ್ಬರಾಗಿದ್ದಾರೆ. ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ರೈಲ್ವೆ ಕೆಳ ಸೇತುವೆ ಬಳಿ ನಗರಸಭೆ ವತಿಯಿಂದ ವೃತ್ತ ನಿರ್ಮಿಸಿ ಶ್ರೀಗಳ ಪುತ್ಥಳಿಯನ್ನು ಆನಾವರಣಗೊಳಿಸುವ ಜೊತೆಗೆ ಅವರ ಹೆಸರನ್ನು ನಾಮಪಕರಣಗೊಳಿಸುವಂತೆ ನಗರಸಭೆ ಆಡಳಿತಕ್ಕೆ ಕೋರಲಾಗಿದೆ.

No comments:

Post a Comment