Friday, July 9, 2021

ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧ ಲಕ್ಷ ರು. ದೇಣಿಗೆ

ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಭದ್ರಾವತಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರಾಮ್ಕೋಸ್) ರು.೧ ಲಕ್ಷ ದೇಣಿಗೆ ನೀಡಿದೆ.
     ಭದ್ರಾವತಿ, ಜು. ೯: ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರಾಮ್ಕೋಸ್) ರು.೧ ಲಕ್ಷ ದೇಣಿಗೆ ನೀಡಿದೆ.
.    ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್ ಡೋಂಗ್ರೆ ಅವರ ಮೂಲಕ ಪರಿಹಾರದ ಚೆಕ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.
    ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ. ಉಪಾಧ್ಯಕ್ಷ ಎಂ. ಪರಮೇಶ್ವರಪ್ಪ. ನಿರ್ದೇಶಕರಾದ ಹೆಚ್.ಆರ್ ತಿಮ್ಮಪ್ಪ, ಎಚ್.ಎಸ್.ಸಂಜೀವಕುಮಾರ್. ಎಚ್.ಟಿ ಉಮೇಶ್ ಮತ್ತು ಉಮಾ ಹಾಗು ಆಡಳಿತಾಧಿಕಾರಿ ಎಂ.ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment