Friday, July 9, 2021

ಜು.೧೧ರಂದು ಕೂಡ್ಲಿಗೆರೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೯: ತಾಲೂಕಿನ ಮೆಸ್ಕಾಂ ಕೂಡ್ಲಿಗೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಅಡಕೆ ತೋಟದಲ್ಲಿ ಹಾದು ಹೋಗಿರುವ ೧೧ ಕೆವಿ ಮಾರ್ಗ ಮತ್ತು ಕಂಬವನ್ನು ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೧೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
     ಕೂಡ್ಲಿಗೆರೆ ಗ್ರಾಮದ ಧನಂಜಯ ಎಂಬುವರ ಅಡಕೆ ತೋಟದಲ್ಲಿ ಹಾದು ಹೋಗಿರುವ ಮಾರ್ಗ ಮತ್ತು ಕಂಬವನ್ನು ರಸ್ತೆ ಬದಿಯಲ್ಲಿ ಹಾದು ಹೋಗಿರುವ ಎನ್‌ಜೆವೈ ಮಾರ್ಗದ ಕೆಳಗಡೆ ಸ್ವಯಂ ಆರ್ಥಿಕ ಯೋಜನೆಯಡಿ ಸ್ಥಳಾಂತರ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.  ಈ ಹಿನ್ನಲೆಯಲ್ಲಿ ಕೂಡ್ಲಿಗೆರೆ, ಆಟಗೇರಿ ಕ್ಯಾಂಪ್, ಕಲ್ಪನಹಳ್ಳಿ, ಹೊಸಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಅತ್ತಿಗುಂದ, ಬಸಲೀಕಟ್ಟೆ, ರೆಡ್ಡಿಕ್ಯಾಂಪ್, ಅರಳಿಹಳ್ಳಿ, ತಿಪ್ಲಾಪುರ, ಜಯನಗರ, ಕಾಗೇಹಳ್ಳ, ಸಂಜೀವನಗರ, ದೇವರಹಳ್ಳಿ, ಗುಡ್ಡದನೇರಲಕೆರೆ, ಕೊಮಾರನಹಳ್ಳಿ, ಬಂಡಿಗುಡ್ಡ, ಬದನೆಹಾಳ್, ಉದಯನಗರ, ಬೆಳ್ಳಿಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

No comments:

Post a Comment