Friday, August 27, 2021

ಕಛೇರಿಗಾಗಿ ಕಟ್ಟಡ ದಾನ

ಭದ್ರಾವತಿ ನಗರದ ಬಿ.ಎಚ್ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಛೇರಿಗಾಗಿ ಜನ್ನಾಪುರ ನಿವಾಸಿ ಟಿ.ಆರ್ ಶ್ರೀಧರ್ ಎಂಬುವರು ಜಯಶ್ರೀ ಕಲ್ಯಾಣ ಮಂಟಪದ ಮುಂಭಾಗ ನೂತನವಾಗಿ ಕಟ್ಟಿಸಿರುವ ನಿವಾಸದ ಮೇಲ್ಭಾಗದ ಕಟ್ಟಡದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಈ ಸಂಬಂಧ ದಾನ ಪತ್ರ ಹಸ್ತಾಂತರಿಸಿದರು.
    ಭದ್ರಾವತಿ, ಆ. ೨೭: ನಗರದ ಬಿ.ಎಚ್ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಛೇರಿಗಾಗಿ ಜನ್ನಾಪುರ ನಿವಾಸಿ ಟಿ.ಆರ್ ಶ್ರೀಧರ್ ಎಂಬುವರು ಜಯಶ್ರೀ ಕಲ್ಯಾಣ ಮಂಟಪದ ಮುಂಭಾಗ ನೂತನವಾಗಿ ಕಟ್ಟಿಸಿರುವ ನಿವಾಸದ ಮೇಲ್ಭಾಗದ ಕಟ್ಟಡದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
    ಈ ಸಂಬಂಧ ಸೊಸೈಟಿ ಆಡಳಿತ ಮಂಡಳಿಗೆ ದಾನಪತ್ರ ಸಹ ಬರೆದುಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ದಾನ ಪತ್ರವನ್ನು ಸೊಸೈಟಿ ಅಧ್ಯಕ್ಷ ಜೆ.ಎನ್ ಆನಂದರಾವ್ ಸ್ವೀಕರಿಸಿದರು. ಸೆ.೧ರಿಂದ ನೂತನ ಕಟ್ಟಡದಲ್ಲಿ ಕಛೇರಿಯ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳಲಿವೆ.
    ಉಪಾಧ್ಯಕ್ಷ ಕೇಶವಮೂರ್ತಿ, ನಿರ್ದೇಶಕರಾದ ಜಿ. ರಮಾಕಾಂತ, ಸಿ.ಕೆ ರಾಮರಾವ್, ತಾರಾಮಣಿ, ಶ್ವೇತ, ಕೆ. ಮಂಜುನಾಥ್, ಕೆ.ಎಸ್ ಸುಬ್ರಮಣ್ಯ, ಎಸ್.ಸಿ ನೀಲಕಂಠ ಜೋಯ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment