ಭದ್ರಾವತಿ ಕಂಚಿನಬಾಗಿಲು ಬಳಿ ಇರುವ ಅಂಬೇಡ್ಕರ್ ನಗರದ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಈ ಬಾರಿ ಪ್ರತಿಷ್ಠಾಪಿಸಲಾಗಿರುವ ಆಕರ್ಷಕವಾದ ಶೇಷವಾಹನ ವಿನಾಯಕ ಮೂರ್ತಿ.
ಭದ್ರಾವತಿ, ಸೆ. ೧೨: ನಗರದ ಕಂಚಿನಬಾಗಿಲು ಬಳಿ ಇರುವ ಅಂಬೇಡ್ಕರ್ ನಗರದ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ವಿಸರ್ಜಿಸಲಾಯಿತು.
ಆಕರ್ಷಕವಾದ ಶೇಷವಾಹನ ವಿನಾಯಕ ಮೂರ್ತಿಯನ್ನು ಈ ಬಾರಿ ಪ್ರತಿಷ್ಠಾಪಿಸಲಾಗಿದೆ. ೩ ದಿನಗಳ ಕಾಲ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು. ಕೋವಿಡ್-೧೯ರ ಹಿನ್ನಲೆಯಲ್ಲಿ ಕಳೆದ ೨ ವರ್ಷಗಳಿಂದ ವಿನಾಯಕ ಮೂರ್ತಿಯನ್ನು ದೇವ್ಥಾನದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತಿದೆ.
ಬೋವಿ ಕಾಲೋನಿ ವಿನಾಯಕ ಮೂರ್ತಿ ವಿಸರ್ಜನೆ :
ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾಗಿರುವ ಬೋವಿ ಕಾಲೋನಿ ಸಂಘಟನೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ನಗರಸಭೆ ವಾರ್ಡ್.೧೨ರ ಹೊಸಮನೆ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಯನ್ನು ಭಾನುವಾರ ವಿಸರ್ಜಿಸಲಾಯಿತು. ಈ ಸಂಘಟನೆ ವತಿಯಿಂದ ಹೆಚ್ಚು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿತ್ತು. ಈ ಬಾರಿ ಕೋವಿಡ್-೧೯ರ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ೩ ದಿನಗಳ ಆಚರಣೆಗೆ ಮೊಟಕು ಗೊಳಿಸಿದೆ.
No comments:
Post a Comment