Thursday, September 2, 2021

ಸೆ.೪ರಂದು ವಿದ್ಯುತ್ ನಿಲುಗಡೆ

ಭದ್ರಾವತಿ, ಸೆ. ೨: ಮೆಸ್ಕಾಂ ನಗರ ಉಪವಿಭಾಗದ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.೪ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಹೊಳೆಹೊನ್ನೂರು ವೃತ್ತ, ಚನ್ನಗಿರಿ ರಸ್ತೆ, ಸತ್ಯ ಚಿತ್ರ ಮಂದಿರ ಸುತ್ತಮುತ್ತಲಿನ ಪ್ರದೇಶ, ಜೈ ಭೀಮ ನಗರ, ತಾಲೂಕು ಕಚೇರಿ ಸುತ್ತಮುತ್ತಲಿನ ಪ್ರದೇಶ, ಅನ್ವರ್ ಕಾಲೋನಿ, ಇಂದಿರಾ ನಗರ, ದುರ್ಗಿ ನಗರ, ಸರ್ಕಾರಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ, ಭೂತನಗುಡಿ, ಗಾಂಧಿನಗರ, ನಗರಸಭಾ ಕಚೇರಿ ಪ್ರದೇಶ, ಮಾಧವ ನಗರ, ಕೋಡಿಹಳ್ಳಿ, ಗೌರಾಪುರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

No comments:

Post a Comment