Tuesday, September 7, 2021

ಸಾಲಗಾರರ ಕಾಟ ಮನನೊಂದು ತಾಯಿ, ಮಗಳು ಆತ್ಮಹತ್ಯೆ

ಸಂಗೀತಾ, ಮಧುಶ್ರೀ
    ಭದ್ರಾವತಿ, ಸೆ. ೭: ಸಾಲಬಾಧೆಯಿಂದ ಬೇಸತ್ತು ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹೊಸಮನೆ  ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.
    ತಾಯಿ ಸಂಗೀತಾ(೩೫), ಮಗಳು ಮಧುಶ್ರೀ(೧೧) ಒಂದೇ ಸೀರೆಯಲ್ಲಿ ಇಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗೀತಾ ಅವರ ಪತಿ ಧನಶೇಖರ್ ಹೋಲ್‌ಸೇಲ್ ವ್ಯಾಪಾರಿಯಾಗಿದ್ದು, ಕೋವಿಡ್-೧೯ ಪರಿಣಾಮ ಸುಮಾರು ೨ ವರ್ಷಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಧನಶೇಖರ್ ಸುಮಾರು ೧೬ ಲಕ್ಷ ರು. ಗಳಿಗೂ ಅಧಿಕ ಬ್ಯಾಂಕ್ ಹಾಗು ಕೈ ಸಾಲ ಮಾಡಿಕೊಂಡಿದ್ದು, ಇದರಿಂದಾಗಿ ಸಾಲಗಾರರ ಕಾಟ ಹೆಚ್ಚಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

No comments:

Post a Comment