Saturday, October 16, 2021

ನಾಡಹಬ್ಬ ದಸರಾ ಮೆರವಣಿಗೆ : ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ೨ನೇ ಬಹುಮಾನ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲಂಕೃತಗೊಂಡ ದೇವಾನುದೇವತೆಗಳಲ್ಲಿ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಅ. ೧೬: ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲಂಕೃತಗೊಂಡ ದೇವಾನುದೇವತೆಗಳಲ್ಲಿ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದೆ.
    ನಗರದ ವಿವಿಧೆಡೆಗಳಿಂದ ಸುಮಾರು ೩೦ಕ್ಕೂ ಅಧಿಕ ಅಲಂಕೃತಗೊಂಡ ದೇವಾನುದೇವತೆಗಳು ಪಾಲ್ಗೊಂಡಿದ್ದವು. ಈ ಪೈಕಿ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದ್ದು, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕೂಡ್ಲಿಗೆರೆ ಎಸ್ ಮಹಾದೇವ ಹಾಗು ಖಜಾಂಚಿ ಎಚ್. ವಿಶ್ವನಾಥ್ ಬಹುಮಾನ ಪಡೆದುಕೊಂಡರು. ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಉಪಸ್ಥಿತರಿದ್ದರು.

No comments:

Post a Comment