Wednesday, January 26, 2022

ವಿಐಎಸ್‌ಎಲ್ ರೈಲ್ವೆ ಉತ್ಪಾದನಾ ಸರಪಳಿಯ ಭಾಗವಾಗಿ ಗುರುತಿಸಿಕೊಂಡಿದೆ : ಸುರಜಿತ್ ಮಿಶ್ರ


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ವಿಐಎಸ್‌ಎಲ್ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಭದ್ರಾವತಿ, ಜ. ೨೬: ಭಾರತೀಯ ರೈಲ್ವೆಗೆ ಸರಬರಾಜು ಮಾಡುವ ಉತ್ಪಾದನಾ ಸರಪಳಿಯ ಭಾಗವಾಗಿ ಪ್ರಸ್ತುತ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುರುತಿಸಿಕೊಂಡಿದೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಹೇಳಿದರು.
    ಅವರು ಬುಧವಾರ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ವಿಶೇಷ ಸಾಧನೆ ಮಾಡಿರುವವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
    ಕಾರ್ಖಾನೆಯಲ್ಲಿ ಎಲ್‌ಎಚ್‌ಬಿ ಆಕ್ಸಲ್‌ಗಳ ಫೋರ್ಜಿಂಗ್ ಉತ್ಪಾದಿಸಲಾಗುತ್ತಿದ್ದು, ಇದೀಗ ಕಾರ್ಖಾನೆ ಭಾರತೀಯ ರೈಲ್ವೆಗೆ ಸರಬರಾಜು ಮಾಡುವ ಉತ್ಪಾದನಾ ಸರಪಳಿಯ ಭಾಗವಾಗಿದೆ. ಉಕ್ಕು ಪ್ರಾಧಿಕಾರ ರೈಲ್ವೆಯಿಂದ ೧೨,೦೦೦ ಎಲ್‌ಎಚ್‌ಬಿ ಆಕ್ಸಲ್‌ಗಳ ಫೋರ್ಜಿಂಗ್ ಸರಬರಾಜು ಮಾಡಲು ಬೇಡಿಕೆ ಪಡೆದುಕೊಂಡಿದೆ. ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಆಕ್ಸಲ್‌ಗಳನ್ನು ಫೋರ್ಜ್ ಮಾಡಿ ಡಿಎಸ್‌ಪಿ, ದುರ್ಗಾಪುರಕ್ಕೆ ಸರಬರಾಜು ಮಾಡಲಾಗುತ್ತಿದೆ. ದೇಶದಲ್ಲಿ ಎಲ್ಲಿಯೂ ಉತ್ಪಾದಿಸಲಾಗದ ಉತ್ಪನ್ನಗಳನ್ನು ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದರು.
    ಕಾರ್ಖಾನೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಹಾಯಕ ಮಹಾಪ್ರಬಂಧಕರಾದ ಎಲ್. ಕುತಲನಾಥನ್ ಮತ್ತು ಕೆ.ಎಸ್ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಹಾಗುನಗರಾಡಳಿತ ಮತ್ತು ಭದ್ರತಾ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

No comments:

Post a Comment