Thursday, February 10, 2022

ಮಗನ ಮದುವೆ ಚಪ್ಪರ ಕಾರ್ಯ ದಿನದಂದು ತಂದೆ ಹೃದಯಾಘಾತದಿಂದ ನಿಧನ

ಬೋರೇಗೌಡ
    ಭದ್ರಾವತಿ, ಫೆ. ೧೦: ಮಗನ ಮದುವೆ ಚಪ್ಪರ ಕಾರ್ಯ ದಿನದಂದು ತಂದೆ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಬುಧವಾರ ನಗರಸಭೆ ವ್ಯಾಪ್ತಿಯ ಉಜ್ಜನಿಪುರದಲ್ಲಿ ನಡೆದಿದೆ.
    ಬೋರೇಗೌಡ ಎಂಬುವರು ಮೃತಪಟ್ಟಿದ್ದಾರೆ. ಓರ್ವ ಹೆಣ್ಣು ಮಗಳು, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ಬೋರೇಗೌಡ ಈ ಹಿಂದೆಯೇ ಮಗಳಿಗೆ ಮಾಡಿದ್ದು, ಉಳಿದ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವನಿಗೆ ಮದುವೆ ಮಾಡುವ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಬುಧವಾರ ಚಪ್ಪರ ಕಾರ್ಯವಿದ್ದು, ಗುರುವಾರ ಮದುವೆ ನಡೆಯಬೇಕಿತ್ತು. ಆದರೆ ಬೋರೇಗೌಡರವರು ಚಪ್ಪರ ಶಾಸ್ತ್ರ ಮುಗಿಯುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ನಡೆಯಿತು.
    ಬೋರೇಗೌಡರವರು ಈ ಬಾರಿ ನಗರಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಇವರ ನಿಧನಕ್ಕೆ ಜೆಡಿಎಸ್ ಪಕ್ಷದ ಮುಖಂಡರು, ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

No comments:

Post a Comment