Wednesday, May 4, 2022

ಉದ್ಯೋಗ ಖಾತ್ರಿ ಯೋಜನೆ : ವಿಕಲಚೇತನರ ನೋಂದಾಣಿ


ಭದ್ರಾವತಿ :  ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ದುಡಿಯೋಣ ಬಾ ಅಭಿಯಾನದಲ್ಲಿ ಬುಧವಾರ ವಿಶೇಷವಾಗಿ ವಿಲಚೇತನರ  ನೋಂದಾಣಿ ನಡೆಸಲಾಯಿತು.
 ಉದ್ಯೋಗ ಚೀಟಿ ವಿತರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಡಿ ಶೇಖರಪ್ಪ, ಖಾತ್ರಿ ಯೋಜನೆಯಲ್ಲಿ ವಿಕಲಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಕೆಲಸದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ.  ದಿನದ ಕೂಲಿ 309 ರು. ಜೊತೆಗೆ 10 ರು. ಹೆಚ್ಚುವರಿಯಾಗಿ ಸಲಕರಣೆ ವೆಚ್ಚವಾಗಿ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಂಡು ವಿಕಲಚೇತನರು ಸಹ ಆರ್ಥಿಕವಾಗಿ ಸದೃಢ ಹೊಂದುವಂತೆ ಮನವಿ ಮಾಡಿದರು.
          ಗ್ರಾಮ ಪಂಚಾಯಿತಿ ಸದಸ್ಯ  ಎಸ್.ಎಲ್ ರವಿಕುಮಾರ್ , ಪಿಡಿಓ ಸುರೇಶ್ ಕುಮಾರ್ , ಎಸ್ ಡಿಎ ಭಾಸ್ಕರ್, ವಿ ಆರ್ ಡಬ್ಲ್ಯೂ ಪರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು . 

No comments:

Post a Comment