ಅಪಘಾತದಲ್ಲಿ ಮೃತಪಟ್ಟಿರುವ ಅಪರಿಚಿತ ವಯೋವೃದ್ಧ
ಭದ್ರಾವತಿ, ಜೂ. ೬: ಅಪಘಾತದಲ್ಲಿ ಅಪರಿಚಿತ ವಯೋವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಪಾಸ್ ರಸ್ತೆ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪ ನಡೆದಿರುವ ಅಪಘಾತದಲ್ಲಿ ಸುಮಾರು ೬೫ ರಿಂದ ೭೦ ವರ್ಷದ ವಯೋವೃದ್ಧರು ಮೃತಪಟ್ಟಿದ್ದು, ಇದುವರೆಗೂ ಮೃತರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ ಪೇಪರ್ ಟೌನ್ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.
No comments:
Post a Comment