ಮಂಗಳವಾರ, ಜೂನ್ 28, 2022

ಜು.೧ರಿಂದ ಉದ್ಯೋಗ ಕಾಯಂಗೊಳಿಸಲು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ

    ಭದ್ರಾವತಿ, ಜೂ. ೨೯: ಉದ್ಯೋಗ ಕಾಯಂಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜು.೧ರಂದು ನಗರಸಭೆ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
    ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಉದ್ಯೋಗ ಕಾಯಂಗೊಳಿಸುವಂತೆ ಮನವಿ ಮಾಡಿದ್ದು, ಆದರೆ ಇದಕ್ಕೆ ಸರ್ಕಾರ ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಪ್ರಸ್ತುತ ನೀಡಲಾಗುತ್ತಿರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಉದ್ಯೋಗದ ಭದ್ರತೆ ಜೊತೆಗೆ ಜೀವನದ ಭದ್ರತೆ ಸಹ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕಾಯಂಗೊಳಿಸುವುದು ಅನಿರ್ವಾಯವಾಗಿದ್ದು, ನ್ಯಾಯ ಸಿಗುವ ವರೆಗೂ ಮುಷ್ಕರ ನಡೆಸಲಾಗುವುದು.
    ನಗರಸಭೆ ನೇರಪಾವತಿ ಪೌರ ಕಾರ್ಮಿಕರು, ಲೋಡರ್‍ಸ್, ಕಸದ ವಾಹನ ಚಾಲಕರು ಹಾಗು ಹೆಲ್ಪರ್‍ಸ್, ಶೌಚಾಲಯ ನೌಕರರು ಹಾಗು ನೇರಪಾವತಿ ಹೊರಗುತ್ತಿಗೆಯಲ್ಲಿರುವ ಎಲ್ಲಾ ವಿಭಾಗದ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವ ಯಶಸ್ವಿಗೊಳಿಸುವಂತೆ ಸಂಘದ ಖಜಾಂಮಚಿ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ