Saturday, July 30, 2022

ಕುರುಬರ ಸಂಘದ ಅಧ್ಯಕ್ಷರಾಗಿ ಬಿ.ಎಂ ಸಂತೋಷ್ ೨ನೇ ಬಾರಿಗೆ ಪುನರ್ ಆಯ್ಕೆ

ಭದ್ರಾವತಿ ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಶನಿವಾರ ನಡೆದ ಚುನಾವಣೆಯಲ್ಲಿ ೨ನೇ ಬಾರಿಗೆ ಬಿ.ಎಂ ಸಂತೋಷ್ ಪುನರ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜು. ೩೦: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಬಿ.ಎಂ ಸಂತೋಷ್ ಪುನರ್ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಬಿ.ಎಂ ಸಂತೋಷ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸತೀಶ್ ಹೊಳೆಹೊನ್ನೂರು ಮತ್ತು ಬಿ.ಎಸ್ ಮಂಜುನಾಥ್, ಕಾರ್ಯದರ್ಶಿಯಾಗಿ ಬಿ.ಎ ರಾಜೇಶ್, ಸಹಕಾರ್ಯದರ್ಶಿಯಾಗಿ ಜೆ. ಕುಮಾರ್, ಖಜಾಂಚಿಯಾಗಿ ಬಿ.ಎಚ್ ವಸಂತ, ಲೆಕ್ಕಪರಿಶೋಧಕರಾಗಿ ಕೆ. ಕೇಶವ, ಕಾನೂನು ಸಲಹೆಗಾರರಾಗಿ ಎಲ್. ಪ್ರವೀಣ್ ಹಾಗು ನಿರ್ದೇಶಕರಾಗಿ ಸಣ್ಣಯ್ಯ, ನಾಗರಾಜ್, ಲೋಕೇಶ್, ವಿನೋದ್‌ಕುಮಾರ್, ಹೇಮಾವತಿ, ಬಿ.ಎಸ್ ನಾರಾಯಣಪ್ಪ ಮತ್ತು ಮಂಜುನಾಥ್(ಕೊಯ್ಲಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ತಾಲೂಕು ಕುರುಬರ ಸಂಘದ ಆಡಳಿತ ಮಂಡಳಿ ಒಟ್ಟು ೧೫ ನಿರ್ದೇಶಕ ಸ್ಥಾನಗಳನ್ನು ಒಳಗೊಂಡಿದ್ದು, ಚುನಾವಣಾಧಿಕಾರಿಯಾಗಿ ನವೀನ್ ಕರ್ತವ್ಯ ನಿರ್ವಹಿಸಿದರು.

No comments:

Post a Comment