Tuesday, August 16, 2022

ಹಲ್ಲೆಗೊಳಗಾಗಿರುವ ಸುನಿಲ್ ಬಜರಂಗದಳ ಕಾರ್ಯಕರ್ತ : ರಾಘವನ್ ವಡಿವೇಲು

ರಾಘವನ್ ವಡಿವೇಲು
    ಭದ್ರಾವತಿ, ಆ. ೧೬: ನಗರಸಭೆ ವ್ಯಾಪ್ತಿಯ ನೆಹರು ನಗರದ ನಿವಾಸಿ ಸುನಿಲ್ ಬಜರಂಗದಳ ಕಾರ್ಯಕರ್ತನಾಗಿದ್ದು, ಮಂಗಳವಾರ ಬೆಳಿಗ್ಗೆ ಮುಸ್ಲಿಂ ಸಮುದಾಯದ ಕೆಲವರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸುನಿಲ್ ನೀಡಿದ ಹೇಳಿಕೆಯನ್ನು ದೂರಿನಲ್ಲಿ ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು ಆರೋಪಿಸಿದ್ದಾರೆ.
    ಪತ್ರಿಕೆಗೆ ಮಾಹಿತಿ ನೀಡಿದ ಅವರು, ಹಲ್ಲೆಗೊಳಗಾಗಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನಿಲ್ ಮೂಲತಃ ಬಜರಂಗದಳ ಕಾರ್ಯಕರ್ತನಾಗಿದ್ದು, ಇದನ್ನು ಸುನಿಲ್ ಸಹ ಟಿ.ವಿ ಮಾಧ್ಯಮದವರ ಮುಂದೆ ಸ್ಪಷ್ಟಪಡಿಸಿದ್ದಾನೆ. ಈತನ ಮೇಲೆ ವಿನಾಕಾರಣ ಮುಸ್ಲಿಂ ಸಮುದಾಯದ ಕೆಲವರು ಹಲ್ಲೆ ನಡೆಸಿದ್ದಾರೆ.
    ಆದರೆ ಕೆಲವರು ಸುನಿಲ್ ಯಾವುದೇ ಸಂಘಟನೆ, ಪಕ್ಷಕ್ಕೆ ಸೇರಿಲ್ಲ ಎಂದು ಹೇಳುವ ಮೂಲಕ ಈ ಪ್ರಕರಣದ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ.  ಪೊಲೀಸರು ಸುನಿಲ್ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

No comments:

Post a Comment