Friday, August 12, 2022

೩ ದಿನಗಳ ರಾಯರ ಆರಾಧನೆ ಮಹೋತ್ಸವ : ಪಾದಪೂಜೆ ಉತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ೩ ದಿನಗಳ ಕಾಲ ಆರಾಧನೆ ಮಹೋತ್ಸವ ಜರುಗುತ್ತಿದ್ದು, ಮೊದಲ ದಿನ ಶುಕ್ರವಾರ ಭಕ್ತರ ಮನೆಗಳಿಗೆ ಪಾದಪೂಜೆ ಉತ್ಸವ ನಡೆಯಿತು.
    ಭದ್ರಾವತಿ, ಆ. ೧೨: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ೩ ದಿನಗಳ ಕಾಲ ಆರಾಧನೆ ಮಹೋತ್ಸವ ಜರುಗುತ್ತಿದ್ದು, ಮೊದಲ ದಿನ ಶುಕ್ರವಾರ ಭಕ್ತರ ಮನೆಗಳಿಗೆ ಪಾದಪೂಜೆ ಉತ್ಸವ ನಡೆಯಿತು.
.    ಬೆಳಗ್ಗೆ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.   ಸೇವಾಕರ್ತರು ರಾಯರ ಉತ್ಸವ ಮೂರ್ತಿ ಹಾಗು ಪಾದಗಳೊಂದಿಗೆ ರಾಷ್ಟ್ರ ಧ್ವಜ ಹಿಡಿದು ಮಂಗಳ ವಾದ್ಯಗಳೊಂದಿಗೆ ಭಕ್ತರ ಮನೆಗಳಿಗೆ ತೆರಳಿದರು.
    ದೇವಸ್ಥಾನದ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ, ನಿರಂಜನಚಾರ್, ಪವನ್‌ಕುಮಾರ್ ಉಡುಪ, ಪ್ರಮೋದ್, ವೇದಬ್ರಹ್ಮ ಗೋಪಾಲಕೃಷ್ಣಚಾರ್, ಶ್ರೀನಿವಾಸಚಾರ್, ಸತ್ಯನಾರಾಯಣ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

No comments:

Post a Comment