Wednesday, September 7, 2022

ವಿಳಾಸ ದೃಢೀಕರಣ ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಸೆ. ೭ : ನಗರದ ಚನ್ನಗಿರಿ ರಸ್ತೆಯ ಶ್ರೀ ಭವಾನಿ ಸಂಕೀರ್ಣದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸರ್ವ ಸದಸ್ಯರ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಒಂದು ವೇಳೆ ಸದಸ್ಯರ ವಿಳಾಸ ಬದಲಾವಣೆಯಾಗಿದ್ದಲ್ಲಿ ವಿಳಾಸದ ದೃಢೀಕರಣ ದಾಖಲಾತಿಯೊಂದಿಗೆ ಸಂಘದ ಕಛೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
    ಸರ್ವ ಸದಸ್ಯರ ಸಭೆ ಹಿನ್ನಲೆಯಲ್ಲಿ ಈಗಾಗಲೇ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆದರೆ ಕೆಲವು ಆಹ್ವಾನ ಪತ್ರಿಕೆಗಳು ಹಿಂದಿರುಗಿವೆ. ಒಂದು ವೇಳೆ ಸದಸ್ಯರ ವಿಳಾಸಗಳು ಬದಲಾವಣೆಯಾಗಿದ್ದಲ್ಲಿ ಅಥವಾ ತಾಲೂಕಿನ ಹೊರಗೆ ವಾಸಿಸುತ್ತಿದ್ದರೇ ತಕ್ಷಣ ವಿಳಾಸ ದೃಡೀಕರಣದ ಮಾಹಿತಿಯನ್ನು ಸಂಘದ ಕಛೇರಿಗೆ ತಿಳಿಸುವಂತೆ ಸಂಘದ ಕಾರ್ಯದರ್ಶಿ ವಿಶ್ವೇಶ್ವರರಾವ್ ಗಾಯಕ್‌ವಾಡ್ ಕೋರಿದ್ದಾರೆ.

No comments:

Post a Comment